Select Your Language

Notifications

webdunia
webdunia
webdunia
webdunia

ಪಾಕ್ ಪರ ಹೇಳಿಕೆ ನೀಡುವವರೇ ದೇಶದ್ರೋಹಿಗಳು: ಡಿ.ವಿ.ಸದಾನಂದಗೌಡ

ಪಾಕ್ ಪರ ಹೇಳಿಕೆ ನೀಡುವವರೇ ದೇಶದ್ರೋಹಿಗಳು: ಡಿ.ವಿ.ಸದಾನಂದಗೌಡ
ಬೆಂಗಳೂರು , ಗುರುವಾರ, 25 ಆಗಸ್ಟ್ 2016 (12:00 IST)
ಗಡಿಯಲ್ಲಿ ಭಾರತೀಯ ಸೈನಿಕರ ರುಂಡ ಚೆಂಡಾಡಿದ್ದಾರೆ. ಇಂಥ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡುವವರೇ ದೇಶದ್ರೋಹಿಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
 
ಬೆಂಗಳೂರಿನಲ್ಲಿ ತಿರಂಗಾ ಯಾತ್ರೆಗ ಚಾಲನೆ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪಾಕಿಸ್ತಾನ ಭಯೋತ್ಪಾದರನ್ನು ಪೋಷಿಸುತ್ತಿದೆ. ಇದು ವಿಶ್ವಕ್ಕೆ ಗೊತ್ತಿರುವ ವಿಷಯ ಎಂದು ಕಿಡಿಕಾರಿದರು.
 
ಇಂದು ಶ್ರೀಕೃಷ್ಣ ದುಷ್ಟರನ್ನು ಸಂಹಾರ ಮಾಡಿದ ದಿನ. ಇಂತಹ ದೇಶದೋಹಿಗಳಿಗೆ ಶ್ರೀಕೃಷ್ಣ ಒಳ್ಳೆಯ ಬುದ್ಧಿ ನೀಡಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. 
 
ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನ ನರಕವಿದ್ದಂತೆ ಅಂತಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ನಟಿ ರಮ್ಯಾ ಅವರು ಪಾಕಿಸ್ತಾನದಲ್ಲಿ ಹಾಗೇನಿಲ್ಲ. ಅಲ್ಲಿನ ಜನರು ನಮ್ಮಂತೆ ಒಳ್ಳೆಯವರು ಅಂತಾ ಹೇಳುವ ಮೂಲಕ ಪಾಕಿಸ್ತಾನವನ್ನು ಹಾಡಿ ಹೊಗಳಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀರು ಬಿಡುವುದೆಂದರೆ ಅಂಗಡಿಯಿಂದ ತರಕಾರಿ ತಂದಂಥಲ್ಲ: ಎಚ್‌ಡಿಕೆಗೆ ಟಾಂಗ್ ನೀಡಿದ ಕಾಗೋಡು