Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್: ಚೆನ್ನಿಗಪ್ಪ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್: ಚೆನ್ನಿಗಪ್ಪ
ತುಮಕೂರು‌ , ಮಂಗಳವಾರ, 5 ಜೂನ್ 2018 (14:11 IST)
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಜೆಡಿಎಸ್ ಮುಖಂಡ ಚೆನ್ನಿಗಪ್ಪ ವಾಗ್ದಾಳಿ ನಡೆಸಿದ್ದಾರೆ. 
ಅನಂತ ಕುಮಾರ್ ಹೆಗಡೆ ಜೆಡಿಎಸ್ ಪಕ್ಷವನ್ನು ಪುಟುಗೋಸಿ ಪಕ್ಷವೆಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಪಾರ್ಟಿ ಪುಟ್ಗೋಸಿ ಅಲ್ಲಾ..ಪುಟ್ಗೋಸಿ ಮನುಷ್ಯನ ಮಾನ ಮುಚ್ಚಿಕೊಳ್ಳುವ ವಸ್ತು ಎನ್ನುವುದನ್ನು ಹೆಗ್ಡೆ ಮರೆತಂತಿದೆ ಅದು ಗೊತ್ತಿಲ್ಲ ಆ ಮನುಷ್ಯನಿಗೆ ಎಂದು ತಿರುಗೇಟು ನೀಡಿದರು.
 
ಅನಂತಕುಮಾರ ಹೆಗಡೆಯವರು ಮೆಂಟಲ್ ಮತ್ತೊಬ್ಬ ಬಿಜೆಪಿ ಮುಖಂಡ ಸುರೇಶ್ ಗೌಡನ ತರ ಮೆಂಟಲ್. ತಮ್ಮ ಸ್ಥಾನದ ಘನತೆ ಗೌರವ ಅರಿಯದೇ ಬಾಯಿಗೆ ಬಂದಂತೆ ಮಾತನಾಡಿ ಪಬ್ಲಿಸಿಟಿ ಪಡೆಯುವ ಗಿಮಿಕ್ ಆರಂಭಿಸಿದ್ದಾರೆ. ಇಂತಹ ಹೇಳಿಕೆಗಳಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
 
ಅನಂತಕುಮಾರ್ ತಾವು ಆಡಿದ ಮಾತನ್ನ ವಾಪಸ್ ತಗೊಳ್ಳಬೇಕು ಇಲ್ಲಾವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಅನ್ನುವುದನ್ನು ತೋರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಚೆನ್ನಿಗಪ್ಪ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರುಣನ ಅರ್ಭಟ: ತತ್ತರಿಸಿದ ತುಮಕೂರು ಜಿಲ್ಲೆಯ ಜನತೆ