Select Your Language

Notifications

webdunia
webdunia
webdunia
webdunia

ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ, ಡಿವಿಎಸ್‌ರದ್ದು ಸುಳ್ಳಿನ ಕಂತೆ: ಕಾಗೋಡು ತಿಮ್ಮಪ್ಪ

ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ, ಡಿವಿಎಸ್‌ರದ್ದು ಸುಳ್ಳಿನ ಕಂತೆ: ಕಾಗೋಡು ತಿಮ್ಮಪ್ಪ
ಬೆಂಗಳೂರು , ಸೋಮವಾರ, 23 ಜನವರಿ 2017 (17:43 IST)
ಕೇಂದ್ರ ಸರಕಾರ ಬರ ಪರಿಹಾರದ ಹಣವನ್ನು ಕೊಟ್ಟಿದೆ ಅನ್ನೋದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ.  ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳುವ ಸದಾನಂದಗೌಡರಿಗೆ ನಾಚೀಕೆಯಾಗಲ್ವಾ? ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರದ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಸುಳ್ಳು ಹೇಳುತ್ತಿದ್ದಾರೆ. ಬರ ಪರಿಹಾರದ ಹಣ ಬಿಡುಗಡೆ ಮಾಡದವರು ಮೊದಲು ರಾಜೀನಾಮೆ ನೀಡಿ ತೊಲಗಲಿ ಎಂದು ತಿರುಗೇಟು ನೀಡಿದರು.
 
ಬರ ಪರಿಹಾರ ಬಿಡುಗಡೆ ವಿಳಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಸದನಂದಗೌಡ, ಇವರೆಲ್ಲ ರಾಜೀನಾಮೆ ಕೊಟ್ಟ ಹೋಗಲಿ. ಕೇಂದ್ರದಿಂದ ನಾವೇ ಬರ ಪರಿಹಾರ ಬಿಡುಗಡೆ ಮಾಡಿಸಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದರು. 
 
ಕೇಂದ್ರ ಸರಕಾರಕ್ಕೆ ಕೇವಲ ಮನವಿ ಸಲ್ಲಿಸಿ ಸುಮ್ಮನೆ ಕೂರುವುದಲ್ಲ. ಅದರ ಫಾಲೋಅಪ್ ಮಾಡಬೇಕು. ಪರಿಹಾರ ಬಂದಿಲ್ಲ ಎಂದು ಸುಮ್ಮನಿರೋದಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದ ತಕ್ಷಣ ದೆಹಲಿಗೆ ಹೋಗುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿಯಾಗಲಿ. ಇಲ್ಲೇ ಕುಳಿತುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2019 ಚುನಾವಣೆಗ ಮುನ್ನ 2,000 ನೋಟು ನಿಷೇಧ?