Webdunia - Bharat's app for daily news and videos

Install App

110 ಹಳ್ಳಿಗಳಿಗೆ ಕಾವೇರಿ ನೀರು ಜನವರಿಗೂ ಅನುಮಾನ!

Webdunia
ಸೋಮವಾರ, 20 ನವೆಂಬರ್ 2023 (14:00 IST)
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಜನವರಿಗೂ ಕಾವೇರಿ ನೀರು ದೊರೆಯುವುದು ಅಸಾಧ್ಯವಾಗಿದ್ದು, ಇದರಿಂದ ಈ ಹಳ್ಳಿಗಳ ಜನರಿಗೆ ಇನ್ನಷ್ಟು ದಿನ ಕೊಳವೆಬಾವಿ ನೀರೇ ಗತಿಯಾಗಲಿದೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5 ನೇ ಹಂತದ ಯೋಜನೆಯನ್ನು 2024 ಜನವರಿಗೆ ಅನುಷ್ಠಾನಗೊಳಿಸುವುದಾಗಿ ಬೆಂಗಳೂರು ಜಲಮಂಡಳಿ ತಿಳಿಸಿತ್ತು. ಆದರೆ, ಇನ್ನೂ ಶೇ.20ರಷ್ಟು ಕೆಲಸಗಳು ಬಾಕಿಯಿರುವ ಕಾರಣ, ಇಲ್ಲಿನ ಜನರಿಗೆ ಕಾವೇರಿ ನೀರು ಸಿಗಲು ಮತ್ತಷ್ಟು ದಿನಗಳು ಕಾಯಬೇಕಿದೆ.

110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿ 15 ವರ್ಷಗಳಾಗಿವೆ. 2007ರಲ್ಲಿ 5 ವಲಯಗಳಾದ ಬೊಮ್ಮನಹಳ್ಳಿ ವಲಯಕ್ಕೆ 33, ಮಹದೇವಪುರಕ್ಕೆ 23, ರಾಜರಾಜೇಶ್ವರಿ ನಗರಕ್ಕೆ 17, ದಾಸರಹಳ್ಳಿಗೆ 11 ಮತ್ತು ಬ್ಯಾಟರಾಯನಪುರ ವಲಯಕ್ಕೆ 26 ಹಳ್ಳಿಗಳನ್ನು ಸೇರ್ಪಡೆ ಮಾಡಲಾಯಿತು. ಈ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5ನೇ ಹಂತದ ಯೋಜನೆ ಆರಂಭವಾಗಿ ಐದು ವರ್ಷಗಳಾದರೂ ಕಾವೇರಿ ನೀರಿನ ಭಾಗ್ಯ ಮಾತ್ರ ಸಿಕ್ಕಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments