Select Your Language

Notifications

webdunia
webdunia
webdunia
webdunia

ಕಾವೇರಿಗಾಗಿ ಜೈಲು ಸೇರಿದ್ದ ಹೋರಾಟಗಾರ ಆತ್ಮಹತ್ಯೆಗೆ ಯತ್ನ

ಕಾವೇರಿಗಾಗಿ ಜೈಲು ಸೇರಿದ್ದ ಹೋರಾಟಗಾರ ಆತ್ಮಹತ್ಯೆಗೆ ಯತ್ನ
ಮಂಡ್ಯ , ಗುರುವಾರ, 20 ಅಕ್ಟೋಬರ್ 2016 (11:51 IST)
ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂದರ್ಭ ಪ್ರತಿಭಟನೆ ನಡೆಸಿ ಜೈಲು ಸೇರಿದ್ದ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
 
ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಅರುಣ್ ಆತ್ಮಹತ್ಯೆಗೆ ಯತ್ನಿಸಿದ ಯವ ರೈತ. ನೀರಿಗಾಗಿ ಹೋರಾಟ ಮಾಡಿದರೆ ಜೈಲಿಗೆ ಹಾಕಿದ್ದಾರೆ ಎಂದು ಮನನೊಂದು ಮಾತ್ರೆಗಳನ್ನು ಸೇವಿಸಿ ತೀವ್ರವಾಗಿ ಅಸ್ವಸ್ಥನಾಗಿದ್ದ. 
 
ಇದನ್ನರಿತ ಕಾರಾಗೃಹದ ಸಿಬ್ಬಂದಿ ತಕ್ಷಣ ಅರುಣ್‌ನನ್ನು ಮಿಮ್ಸ್‌ಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 
 
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾವೇರಿ ಹೋರಾಟಗಾರರು ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕಾರಣಿಗಳಿಗೆ ಫಿಟ್‌‍ನೆಸ್ ಇಲ್ಲದಿದ್ರೂ ಪರವಾಗಿಲ್ಲ, ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ: ಸಿದ್ದರಾಮಯ್ಯ