Webdunia - Bharat's app for daily news and videos

Install App

ರಕ್ತ ಕ್ಯಾನ್ಸರ್‌ ನಿಂದ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಮಗುವಿಗೆ ಯಶಸ್ವಿ ಚಿಕಿತ್ಸೆ

Webdunia
ಮಂಗಳವಾರ, 6 ಜುಲೈ 2021 (14:14 IST)
ಬೆಂಗಳೂರು: ಅತಿ ಕಡಿಮೆ ವಯಸ್ಸಿನಲ್ಲಿ ರಕ್ತಕ್ಯಾನ್ಸರ್‌ಗೆ ತುತ್ತಾಗಿ, ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಹೆಣ್ಣುಮಗುವಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ.
 
ದುಬೈನಲ್ಲಿ ವಾಸವಿದ್ದ 3 ವರ್ಷದ ಹೆಣ್ಣು ಮಗು, “ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ” ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಇತರೆ ಆಸ್ಪತ್ರೆಗಳಲ್ಲಿ ಸಾಕಷ್ಟು ಚಿಕಿತ್ಸೆ ನೀಡಿದ್ದರು ಮಗುವಿಗೆ ಗುಣಮುಖವಾಗುವ ಬದಲು ರಕ್ತ ಕ್ಯಾನ್ಸರ್‌ನ ತೀವ್ರತೆ ಹೆಚ್ಚಾಗಿ, ಸಣ್ಣವಯಸ್ಸಿನಲ್ಲೇ ಮಗುವು ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿತ್ತು. ಫೋರ್ಟಿಸ್ ಆಸ್ಪತ್ರೆಯ ನೇತ್ರಶಾಸ್ತ್ರ ತಂಡದ ವೈದ್ಯರುಗಳಾದ ಹೆಮಟಾಲಜಿ ಹಿರಿಯ ಸಲಹೆಗಾರರಾದ ಡಾ. ನೀಮಾ ಭಟ್, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ ಹಿರಿಯ ಸಲಹೆಗಾರ ಡಾ.ಮಂಗೇಶ್ ಪಿ. ಕಾಮತ್ ಅವರ ತಂಡ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು.
ಈ ಕುರಿತು ಮಾತನಾಡಿದ ಡಾ. ನೀಮಾ ಭಟ್, ರಕ್ತಕ್ಯಾನ್ಸರ್ ಹೊಂದಿದ್ದ ಮಗುವಿಗೆ ಚಿಕಿತ್ಸೆ ನೀಡಲು ಮಗುವಿನ ವಯಸ್ಸು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೂ, ಇದನ್ನು ಸವಾಲಾಗಿಯೇ ಸ್ವೀಕರಿಸಿದ ನಮ್ಮ ತಂಡ, ಮಗುವಿಗೆ ಐವಿ ಕೀಮೋಥೆರಪಿಯೊಂದಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ, ಈ ಚಿಕಿತ್ಸೆಗಳು ಮಗು ಸ್ಪಂದಿಸಲಿಲ್ಲ. ಸಣ್ಣ ಮಗುವಾದ್ದರಿಂದ ಅತಿ ಸೂಕ್ಷ್ಮತೆಯಿಂದ ಚಿಕಿತ್ಸೆ ನೀಡಬೇಕಾಯಿತು.
3 ಡೋಸ್ ಕೀಮೋ ಥೆರಪಿ ಬಳಿಕ ಮಗುವಿಗೆ ಮೊದಲು ಬಲಗಣ್ಣಿನ ದೃಷ್ಟಿ ಬಂದಿತು. ಮಗುವಿಗೆ ದೃಷ್ಟಿ ಮರಳಿದ ನಂತರ ಇಮ್ಯುನೊಥೆರಪಿ ಮಾಡಲಾಗಿದ್ದು, ಮಗುವಿನ ಸೋದರಿಯ ಮೂಳೆಮಜ್ಜೆಯ ಕಸಿ ಮಾಡಿ, ಮಗುವಿನ ರಕ್ತ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಮಗು ಗುಣಮುಖವಾಗಿ ಎಲ್ಲಾ ಮಕ್ಕಳಂತೆಯೇ  ಜೀವನ ನಡೆಸುತ್ತಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು: ಕನ್ನಡಿಗರು ಸಿಗಲಿಲ್ವಾ ಎಂದ ನೆಟ್ಟಿಗರು

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ಬೆಲೆ ಇನ್ನೂ ಏರಿಕೆ, ಎಷ್ಟಾಗಿದೆ ನೋಡಿ

ಪಹಲ್ಗಾಮ್ ದಾಳಿ ನಡೆದು ಎರಡು ತಿಂಗಳಾಗಿಲ್ಲ ಆಗ್ಲೇ ಪಾಕಿಸ್ತಾನದ ಚಾನೆಲ್ ಗಳ ನಿಷೇಧ ವಾಪಸ್

ಕೇಂದ್ರದಿಂದ ಶೀಘ್ರದಲ್ಲೇ ಮಧ್ಯಮವರ್ಗದವರಿಗೆ ಗುಡ್ ನ್ಯೂಸ್: ಇವುಗಳ ಬೆಲೆ ಕಡಿತ

ಮುಂದಿನ ಸುದ್ದಿ
Show comments