Select Your Language

Notifications

webdunia
webdunia
webdunia
webdunia

ಸಂಪುಟ ಪುನಾರಚನೆಯಿಂದ ಕೆಲವರಿಗೆ ಅಸಮಾಧಾನವಾಗಿದೆ: ಸಿಎಂ

ಸಂಪುಟ ಪುನಾರಚನೆಯಿಂದ ಕೆಲವರಿಗೆ ಅಸಮಾಧಾನವಾಗಿದೆ: ಸಿಎಂ
ಬೆಂಗಳೂರು , ಶುಕ್ರವಾರ, 1 ಜುಲೈ 2016 (13:13 IST)
ಸಂಪುಟ ಪುನಾರಚನೆಯಿಂದ ಕೆಲವರಿಗೆ ಅಸಮಾಧಾನವಾಗಿರುವುದು ನಿಜ. ಅತೃಪ್ತರೊಂದಿಗೆ ಮಾತುಕತೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಸಚಿವ ಸ್ಥಾನ ವಂಚಿತರು, ಸಚಿವ ಸ್ಥಾನ ವಂಚಿತರಲ್ಲದವರು ಅನ್ನುವುದಿಲ್ಲ.ಸ್ವಾಭಾವಿಕವಾಗಿ ಸಂಪುಟ ಪುನಾಚರಚನೆಯಾದಾಗ ಅಸಮಾಧಾನ ಹೊರಬರುತ್ತದೆ. ಪಕ್ಷದ ಶಾಸಕರ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
 
ಹಿರಿಯ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ತುಂಬಾ ಅಸಮಾಧಾನಗೊಂಡಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮನವಿ ಮಾಡಿದರು.
 
ಹೊಸಬರಿಗೆ ಸಚಿವ ಸ್ಥಾನ ನೀಡುವ ವಿಚಾರ ಕುರಿತಂತೆ ಪ್ರಸ್ತಾಪಿಸಿದ ಸಿಎಂ, ಕೆಲವೊಮ್ಮೆ ಹೊಸಬರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಾಯುಸೇನೆಗೆ ಬಲ ತುಂಬಿದ ತೇಜಸ್