Select Your Language

Notifications

webdunia
webdunia
webdunia
webdunia

ಪೊಲೀಸರಿಂದ ಕಿಡ್ನಾಪರ್ಸ್ ಮೇಲೆ ಶೂಟೌಟ್: ಆರೋಪಿಗಳು ಅರೆಸ್ಟ್

ಪೊಲೀಸರಿಂದ ಕಿಡ್ನಾಪರ್ಸ್ ಮೇಲೆ ಶೂಟೌಟ್: ಆರೋಪಿಗಳು ಅರೆಸ್ಟ್
ಬೆಂಗಳೂರು , ಗುರುವಾರ, 10 ಆಗಸ್ಟ್ 2017 (20:33 IST)
ಮೂವರು ಉದ್ಯಮಿಗಳನ್ನು ಅಪಹರಿಸಿ, ಬೆದರಿಸಿ 8 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಕಿತ್ತುಕೊಂಡಿದ್ದ ಅಪಹರಣಕಾರರನ್ನು ಪೊಲೀಸರು ಶೂಟೌಟ್ ನಡೆಸಿ ಬಂಧಿಸಿದ್ದಾರೆ. 
ಉದ್ಯಮಿಗಳಾದ ಲಕ್ಷ್ಮಿನಾರಾಯಣ, ಮೊಹಮ್ಮದ್ ಷರೀಫ್ ಮತ್ತು ಹರೀಷ್ ಎನ್ನುವವರನ್ನು ಕಾರಿನಲ್ಲಿ ಅಪಹರಿಸಿ ಹಣ ಕಿತ್ತುಕೊಂಡಿದ್ದಾರೆ. ಆರೋಪಿಗಳು ಮತ್ತೊರ್ವ ಉದ್ಯಮಿ ಅಪಹರಿಸಲು ಸ್ಕೇಚ್ ಹಾಕುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ 10 ದಿನಗಳಲ್ಲಿ ಐವರು ಉದ್ಯಮಿಗಳನ್ನು ಅಪಹರಿಸಿದ್ದರು ಎನ್ನಲಾಗುತ್ತಿದೆ.
 
ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಉದ್ಯಮಿ ಸುಧಾಕರ ಬಳಿ ಕೂಡಾ ಎರಡು ಲಕ್ಷ ರೂ.ಕಿತ್ತುಕೊಂಡಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪೇದೆ ಭೈರಪ್ಪನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
 
ಪೊಲೀಸ್ ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ಬ್ಯಾಡರಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಸತ್ಯನಾರಾಯಣ್‌, ಗುಂಡಿನ ದಾಳಿ ನಡೆಸಿದಾಗ ಆರೋಪಿಯಬ್ಬನಿಗೆ ಗುಂಡೇಟು ತಗುಲಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿಯ ಮೇಲೆ 600 ಬಾರಿ ರೇಪ್ ಎಸಗಿದ ತಂದೆಗೆ 12 ಸಾವಿರ ವರ್ಷ ಶಿಕ್ಷೆ