Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಹುಟ್ಟಿನಿಂದ ಮಾತ್ರ ಲಿಂಗಾಯುತ, ಆಚರಣೆಯಲ್ಲಲ್ಲ : ಮಾತೆ ಮಹಾದೇವಿ

ಯಡಿಯೂರಪ್ಪ ಹುಟ್ಟಿನಿಂದ ಮಾತ್ರ ಲಿಂಗಾಯುತ, ಆಚರಣೆಯಲ್ಲಲ್ಲ : ಮಾತೆ ಮಹಾದೇವಿ
ಬೆಂಗಳೂರು , ಶನಿವಾರ, 29 ಜುಲೈ 2017 (19:32 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಆತ್ಮವಿಶ್ವಾಸವೇ ಇಲ್ಲ. ಹುಟ್ಟಿನಿಂದ ಮಾತ್ರ ಲಿಂಗಾಯುತರಾಗಿದ್ದಾರೆ ಆದ್ರೆ ಆಚರಣೆಯಲ್ಲಿ ಲಿಂಗಾಯುತರಾಗಿಲ್ಲ ಎಂದು ಮಾತಾ ಮಹಾದೇವಿ ವಾಗ್ದಾಳಿ ನಡೆಸಿದ್ದಾರೆ.
 
ಯಡಿಯೂರಪ್ಪ ಧರ್ಮ ಬಿಟ್ಟು ಪಕ್ಷದ ಆಧಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಯಾವ ಧರ್ಮದಲ್ಲಿ ಜನಿಸಿದ್ದಾರೆಯೋ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ವಿಚಾರವಾದಿ, ಹುಟ್ಟಿನಿಂದ ಲಿಂಗಾಯುತರಾಗಿಲ್ಲದಿರಬಹುದು. ಆದರೆ., ತತ್ವಾಚರಣೆಯಲ್ಲಿ ಲಿಂಗಾಯುತರಾಗಿದ್ದಾರೆ. ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಿಳಿಸಿದ್ದಾರೆ. 
 
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಬಸವ ಜಯಂತಿ ದಿನದಂದು. ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕುವಂತೆ ಆದೇಶ ನೀಡಿ ಬಸವ ಪ್ರೇಮವನ್ನು ಮೆರೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.    
 
ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಸಿಎಂ ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಬಹುಮತದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಿ ಬಸವಾಭಿಮಾನಿಗಳು ಸ್ವಯಂಪ್ರೇರಣೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಚುನಾವಣೆ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಿಲ್ಲ ಎಂದರು.
 
ರಂಭಾಪುರಿ ಶ್ರೀಗಳು ಮಹಿಳೆಯ ಚಾರಿತ್ರ್ಯವಧೆ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಅವರ ಹೇಳಿಕೆ ಅಪ್ಪಟ ಸುಳ್ಳು. ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ಮಾತಾ ಮಹಾದೇವಿ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಮಧ್ಯಂತರ ಪ್ರಧಾನಿಯಾಗಿ ಶಾಹಿದ್ ಅಬ್ಬಾಸಿ