Webdunia - Bharat's app for daily news and videos

Install App

ತನ್ನ ಹಾಗೇ ಇರುವ ವ್ಯಕ್ತಿಯ ಜೀವ ತೆಗೆದು ವಿಮೆ ಹಣ ಪಡೆಯಲು ಹೋದ ವ್ಯಕ್ತಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ

Krishnaveni K
ಸೋಮವಾರ, 26 ಆಗಸ್ಟ್ 2024 (09:52 IST)
ಬೆಂಗಳೂರು: ವಿಮೆ ಹಣಕ್ಕಾಗಿ ತನ್ನ ಹಾಗೇ ಹೋಲುವ ವ್ಯಕ್ತಿಯ ಜೀವ ತೆಗೆದು ಉದ್ಯಮಿಯೊಬ್ಬ ಸಿಕ್ಕಿಬಿದ್ದ ಕತೆಯೇ ರೋಚಕವಾಗಿದೆ. ಈ ಘಟನೆ ನಡೆದಿರುವುದು ಹೊಸಕೋಟೆಯಲ್ಲಿ.

ಮುನಿಸ್ವಾಮಿ ಗೌಡ ತನ್ನ ಪತ್ನಿ ಶಿಲ್ಪಾ ರಾಣಿ ಮತ್ತು ಚಾಲಕ ದೇವೇಂದ್ರ ನಾಯಕ್ ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ. ಮುನಿಸ್ವಾಮಿ ಗೌಡ ಉದ್ಯಮಿಯಾಗಿದ್ದ. ಆತನಿಗೆ ಸಾಕಷ್ಟು ಸಾಲವಾಗಿತ್ತು. ಆದರೆ ಇದನ್ನು ತೀರಿಸಲು ಆತ ಇದೇ ಮಾರ್ಗ ಕಂಡುಕೊಂಡಿದ್ದ. ಪತ್ನಿ ಶಿಲ್ಪಾ ರಾಣಿ ನಾಮಿನಿಯಾಗಿ ಸಾಕಷ್ಟು ವಿಮೆ ಪಾಲಿಸಿ ಮಾಡಿಸಿಕೊಂಡಿದ್ದ.

ಹೀಗಾಗಿ ಸಾಲ ತೀರಿಸಿಕೊಳ್ಳಲು ತನ್ನ ಸಾವಿನ ಕತೆ ಕಟ್ಟಲು ಯೋಜನೆ ರೂಪಿಸಿದ್ದ. ಇದಕ್ಕಾಗಿ ಒಬ್ಬ ಬಡ ಭಿಕ್ಷಕನನ್ನು ಬಳಸಿಕೊಂಡಿದ್ದ. ಕೆಲಸ ಮಾಡಿಸುವ ನೆಪದಲ್ಲಿ ಆತನನ್ನು ರಸ್ತೆ ಬದಿಯಲ್ಲಿ ಟಯರ್ ಬದಲಿಸಲು ಸಹಾಯ ಮಾಡಲು ಹೇಳಿದ್ದ. ಈ ವೇಳೆ ಬೇಕೆಂದೇ ಆತನನ್ನು ರಸ್ತೆ ದೂಡಿದ್ದ. ಅದೇ ಹೊತ್ತಿಗೆ ಚಾಲಕ ದೇವೇಂದ್ರ ನಾಯಕ ಆತನ ಮೇಲೆ ಲಾರಿ ಚಲಾಯಿಸಿ ಕೊಂದೇ ಬಿಟ್ಟಿದ್ದ. ಬಳಿಕ ಇದನ್ನು ತಾನೇ ಆಕ್ಸಿಡೆಂಟ್ ನಲ್ಲಿ ಸತ್ತಿದ್ದಾಗಿ ಬಿಂಬಿಸಿದ್ದ.

ಇದಕ್ಕಾಗಿ ಚಾಲಕ ದೇವೇಂದ್ರ ನಾಯಕ್ ಕೈ ಜೋಡಿಸಿದ್ದ. ಅಪರಿಚಿತ ಮೃತದೇಹವನ್ನು ತನ್ನ ಗಂಡನದ್ದು ಎಂದು ಶಿಲ್ಪಾ ರಾಣಿ ಖಚಿತಪಡಿಸಿ ಅಂತ್ಯಸಂಸ್ಕಾರವನ್ನೂ ಮಾಡಿದ್ದಳು. ಬಳಿಕ ಗಂಡ ಮಾಡಿಸಿಟ್ಟಿದ್ದ ವಿಮೆ ಹಣವನ್ನೂ ಪಡೆದುಕೊಳ್ಳುವ ಹಂತದಲ್ಲಿದ್ದಳು.

ಆದರೆ ಈ ನಡುವೆ ಆರೋಪಿ ಮುನಿಸ್ವಾಮಿ ಗೌಡ ತಾನು ಬದುಕಿರುವ ವಿಚಾರವನ್ನು ಅಕಸ್ಮಾತ್ತಾಗಿ ತನ್ನ ದೂರದ ಸಂಬಂಧಿಯೂ ಆಗಿರುವ ಚಿಕ್ಕಬಳ್ಳಾಪುರದ ಸಿದ್ಲಘಟ್ಟದ ಇನ್ಸ್ ಪೆಕ್ಟರ್ ಶ್ರೀನಿವಾಸ್ ಬಳಿ ಬಾಯ್ಬಿಟ್ಟಿದ್ದ. ಇದನ್ನು ತಿಳಿದ ತಕ್ಷಣ ಶ್ರೀನಿವಾಸ್ ಈ ವಿಚಾರವನ್ನು ಗಂಡಸಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿದ್ದು, ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದಾರೆ. ಇದರಿಂದಾಗಿ ಆರೋಪಿಗಳೆಲ್ಲರೂ ಬಂಧನಕ್ಕೊಳಗಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಮುಂದಿನ ಸುದ್ದಿ
Show comments