Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಯನ್ನು ಎಳೆದಾಡಿ ಕಚ್ಚಿದ ಬಸ್ ಕಂಡಕ್ಟರ್

ವಿದ್ಯಾರ್ಥಿಯನ್ನು ಎಳೆದಾಡಿ ಕಚ್ಚಿದ ಬಸ್ ಕಂಡಕ್ಟರ್
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (11:08 IST)
ಸರ್ಕಾರಿ ಬಸ್ ನಿರ್ವಾಹಕಿಯೋರ್ವಳು ವಿದ್ಯಾರ್ಥಿಯನ್ನು ಎಳೆದಾಡಿ ಕಚ್ಚಿದ ಘಟನೆ ಬಸ್ ನಿಲ್ದಾಣದಲ್ಲಿ ಡೈ ಡ್ರಾಮಾ ಸೃಷ್ಟಿಸಿದ ಘಟನೆ ಗಂಗಮ್ಮನಗುಡಿಯ ಕಮ್ಮನಗೊಂಡನಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿದೆ. 
ಪಾಸ್ ವಿಚಾರವಾಗಿ ಇಬ್ಬರು ವಿದ್ಯಾರ್ಥಿಗಳು ಮತ್ತು ಜಾಲಹಳ್ಳಿ- ಕೆ ಆರ್ ಪುರಮ್ ಮಾರ್ಗದ ಬಸ್ ಕಂಡಕ್ಟರ್ ಮಧ್ಯೆ ಜಟಾಪಟಿಯಾಗಿದ್ದು ಕೋಪ ವಿಕೋಪಕ್ಕೆ ಬದಲಾಗಿದ್ದು ಚಾಲಕ ಬಸ್‌ನ್ನು ನಿಲ್ಲಿಸಿದ್ದಾನೆ. ಜಗಳ ತಾರಕಕ್ಕೇರುತ್ತಿದ್ದಂತೆ ಆಕೆ ಒಬ್ಬ ವಿದ್ಯಾರ್ಥಿ ಕೈಯ್ಯಿಗೆ ಕಚ್ಚಿದ್ದಾಳೆ.
 
ಮಧ್ಯ ಪ್ರವೇಶಿಸಿದ ಜಾಲಹಳ್ಳಿ ಸಂಚಾರಿ ಪೊಲೀಸರ ಜತೆಗೂ ಆಕೆ ಜಗಳ ತೆಗೆದಿದ್ದು, ಬಳಿಕ ವಿದ್ಯಾರ್ಥಿ ಮತ್ತು ನಿರ್ವಾಹಕಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯ್ತು.
 
ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿಗಾಗಿ ದೆಹಲಿಯತ್ತ ಪ್ರಯಾಣ ಬೆಳೆಸಿರುವ ಸಿಎಂ ಸಿದ್ದರಾಮಯ್ಯ