Select Your Language

Notifications

webdunia
webdunia
webdunia
webdunia

ಚಾಲಕನಿಗೆ ಹೃದಯಾಘಾತ: ಮನೆಗೆ ನುಗ್ಗಿದ ಬಸ್

ಚಾಲಕನಿಗೆ ಹೃದಯಾಘಾತ: ಮನೆಗೆ ನುಗ್ಗಿದ ಬಸ್
ಆಗುಂಬೆ , ಬುಧವಾರ, 1 ಮಾರ್ಚ್ 2017 (07:38 IST)
ಚಾಲಕ ಹೃದಯಾಘಾತಕ್ಕೊಳಗಾದರಿಂದ ಆತನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಅಂಗಡಿ, ಮನೆಗೆ ನುಗ್ಗಿದ ಘಟನೆ ಮಂಗಳವಾರ ತೀರ್ಥಹಳ್ಳಿಯ ಗುಡ್ಡೇಕೇರಿಯಲ್ಲಿ ನಡೆದಿದೆ. 
 
ಬಸ್ ಮಂಗಳೂರಿನಿಂದ ಶಿವಮೊಗ್ಗ ಕಡೆ ಚಲಿಸುತ್ತಿತ್ತು. ಹೃದಯಾಘಾತಕ್ಕೊಳಗಾದ ಚಾಲಕ  ಶ್ರೀಕಂಠ (50) ಸ್ಥಳದಲ್ಲೇ ಮೃತಪಟ್ಟಿದ್ದು, ಇವರು ತಾಲ್ಲೂಕಿನ ಕಟ್ಟೆಹಕ್ಕಲು ಸಮೀಪ ಕೂಳೂರು ಗ್ರಾಮದ ನಿವಾಸಿಯಾಗಿದ್ದರು.ಅಪಘಾತದಿಂದ ಬಸ್‌ನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಜೆ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.
 
ಆಗುಂಬೆ ಸಮೀಪವಿದ್ದಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಲ್ಲಿಂದ 30ಕೀಲೋಮೀಟರ್ ದೂರದಲ್ಲಿರುವ ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಪಡೆಯುವುದೆಂದು ತೀರ್ಮಾನಿಸಿ ಪ್ರಯಾಣವನ್ನು ಮುಂದುವರೆಸಲಾಗಿತ್ತು. ಆದರೆ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಅವರು ಹೃದಯಾಘಾತಕ್ಕೊಳಗಾಗಿದ್ದಾರೆ.
 
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಮ್ಮನನ್ನು ಭೇಟಿಯಾದ ಸಚಿವರು