Select Your Language

Notifications

webdunia
webdunia
webdunia
webdunia

ದಲಿತ ಕುಟುಂಬಗಳಿಗೆ ಭೋಜನ ಕೂಟ ಏರ್ಪಡಿಸಿದ ಬಿಎಸ್‌ವೈ

ದಲಿತ ಕುಟುಂಬಗಳಿಗೆ ಭೋಜನ ಕೂಟ ಏರ್ಪಡಿಸಿದ ಬಿಎಸ್‌ವೈ
ಬೆಂಗಳೂರು , ಮಂಗಳವಾರ, 4 ಜುಲೈ 2017 (18:20 IST)
ದಲಿತ ಕುಟುಂಬಗಳ ಸಮಸ್ಯೆಗಳನ್ನು ಅರಿಯಲು ರಾಜ್ಯ ಪ್ರವಾಸ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ದಲಿತ ಕುಟುಂಬಗಳಿಗಾಗಿ ಭೋಜನ ಕೂಟ ಏರ್ಪಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಯಡಿಯೂರಪ್ಪ ಕಳೆದ ಮೇ 18 ರಿಂದ ಜೂನ್ 29 ರವರೆಗೆ 27 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು ಮತ್ತು ಸ್ಥಳೀಯ ಮುಖಂಡರೊಂದಿಗೆ ದಲಿತರ ಮನೆಯಲ್ಲಿ ತಿಂಡಿ ಸೇವನೆ ಮಾಡಿದ್ದರು.  
 
ತಾವು ತಿಂಡಿ ಸೇವಿಸಿದ ಎಲ್ಲಾ ದಲಿತ ಕುಟುಂಬಗಳಿಗೆ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಭೋಜನಕೂಟ ಏರ್ಪಡಿಸಿ ಸತ್ಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
 
ದಲಿತ ಸಮುದಾಯದ ಬಗ್ಗೆ ನನಗೆ ನಿಜವಾದ ಕಳಕಳಿಯಿದೆ. ದಲಿತರ ಏಳಿಗೆಯೇ ರಾಜ್ಯದ ಏಳಿಗೆ .ಭೋಜನಕೂಟ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಾದ ಮನೆಯ ಸದಸ್ಯರನ್ನ ಹುಲಿಗೆ ಬಲಿ ಕೊಡುತ್ತಿರುವ ಜನ: ಉತ್ತರಪ್ರದೇಶದಲ್ಲಿ ಆತಂಕಕಾರಿ ಕೃತ್ಯ