Select Your Language

Notifications

webdunia
webdunia
webdunia
webdunia

ಜನತೆಯ ಮನಸ್ಸಿನಿಂದ ಬಿವೈಎಸ್‌ಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ: ಎಚ್‌.ಎಸ್.ಮಹದೇವ್ ಪ್ರಸಾದ್

ಜನತೆಯ ಮನಸ್ಸಿನಿಂದ ಬಿವೈಎಸ್‌ಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ: ಎಚ್‌.ಎಸ್.ಮಹದೇವ್ ಪ್ರಸಾದ್
ಚಾಮರಾಜನಗರ , ಶುಕ್ರವಾರ, 28 ಅಕ್ಟೋಬರ್ 2016 (11:43 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರಿಗೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಸಿಕ್ಕಿರಬಹುದು. ಆದರೆ, ಜನರ ಮನಸ್ಸಿನಿಂದ ಸಿಕ್ಕಿಲ್ಲ ಎಂದು ಸಚಿವ ಎಚ್‌.ಎಸ್.ಮಹದೇವ್ ಪ್ರಸಾದ್ ಹೇಳಿದರು. 
ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನಡೆದ ರಾಷ್ಟ್ರೀಯ ಹೆದ್ದಾರೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯದಲ್ಲಿ ತನ್ನದೇ ಆದ ಭದ್ರ ಬುನಾದಿ ಹೊಂದಿದೆ ಎಂದರು.
 
ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಸಿಕ್ಕ ಕೂಡಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮವೂ ಆಗಲ್ಲ. ಬದಲಾವಣೆಯೂ ಆಗುವುದಿಲ್ಲ. ಅವರೇನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಟೀಕಿಸಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ: ಯಲ್ಲಪ್ಪ ತಂದೆ ಗೋಳಾಟ