Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ: ಯಲ್ಲಪ್ಪ ತಂದೆ ಗೋಳಾಟ

ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದ: ಯಲ್ಲಪ್ಪ ತಂದೆ ಗೋಳಾಟ
ಬೆಳಗಾವಿ , ಶುಕ್ರವಾರ, 28 ಅಕ್ಟೋಬರ್ 2016 (11:13 IST)
ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಮೆ ಬಳಿಕ ನಾನು ನಿಮ್ಮನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಅವನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ ಎಂದು ಪೇದೆ ಯಲ್ಲಪ್ಪ ತಂದೆ ಬಸಪ್ಪ ಕಣ್ಣೀರಿಟ್ಟಿದ್ದಾರೆ.
 
ನನ್ನ ಮಗ ಯಲ್ಲಪ್ಪನ ಬಟ್ಟೆ ಮೇಲೆ ರಕ್ತದ ಕಲೆಗಳು ಇವೆ. ಅದು ಹೇಗಾಯ್ತು? ನಮ್ಮ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ. ನಮ್ಮ ಸಂಶಯ ಬಗೆಹರಿಸಲಿ ಅಲ್ಲಿಯವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದರು. 
 
ನನ್ನ ಎರೆಡನೇ ಪುತ್ರನ ಸಾವಿಗೂ ಪೊಲೀಸ್ ಇಲಾಖೆಯವರೇ ಕಾರಣ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪೇದೆ ಯಲ್ಲಪ್ಪ ತಂದೆ ಬಸಪ್ಪ ಅಳಲು ತೊಡಿಕೊಂಡಿದ್ದಾರೆ.

ತಾಲ್ಲೂಕಿನ ಕುಲಗೋಡದಲ್ಲಿ ಪೊಲೀಸ್ ಪೇದೆಯಾಗಿದ್ದ ಯಲ್ಲಪ್ಪ (28)ನಿನ್ನೆ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಸಣ ಸೇರಿದ ಮೂವರು ಬೈಕ್ ಸವಾರರು