Webdunia - Bharat's app for daily news and videos

Install App

ತಂದೆಯ ಅಸ್ತಿಯನ್ನು ಭಾರತಕ್ಕೆ ತನ್ನಿ.! -'ನೇತಾಜಿ ಸುಭಾಷ ಚಂದ್ರ ಬೋಸ'ರ ಪುತ್ರಿ ಮನವಿ

Webdunia
ಭಾನುವಾರ, 23 ಜನವರಿ 2022 (19:53 IST)
ನೇತಾಜಿ ಸುಭಾಷ ಚಂದ್ರ ಬೋಸ ಅವರ ಸಾವಿಗೆ ೭೭ ವರ್ಷ ಕಳೆದರೂ, ಜಪಾನಿನಲ್ಲಿ ಇರುವ ಅವರ ಆಸ್ತಿ ಭಾರತಕ್ಕೆ ತರಲು ಸಾಧ್ಯವಾಗಿಲ್ಲ. ನೇತಾಜಿ ಬೋಸ ಅವರ ಪುತ್ರಿಯಾಗಿ ನನಗೆ ನೇತಾಜಿಯವರ ಆಸ್ತಿ ಭಾರತಕ್ಕೆ ಬರುವುದನ್ನು ನೋಡಲು ಬಯಸುತ್ತೇನೆ.
ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು; ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು, ಎಂದು ನೇತಾಜಿ ಸುಭಾಷ ಚಂದ್ರ ಬೋಸ ಅವರ ಏಕೈಕ ಪುತ್ರಿ ಅನಿತಾ ಬೋಸ ಇವರು ಭಾವನೆಯನ್ನು ಒಂದು ಸಂದರ್ಶನದಲ್ಲಿ ವ್ಯಕ್ತ ಪಡಿಸಿದರು. ಜನವರಿ ೨೩ ರಂದು ನೇತಾಜಿ ಬೋಸ ಅವರ ಜಯಂತಿ ಇದೆ.
ಅನಿತಾ ಬೋಸ ತಮ್ಮ ಮಾತನ್ನು ಮುಂದುವರೆಸುತ್ತಾ, ನೇತಾಜಿ ಸುಭಾಷ ಚಂದ್ರ ಬೋಸ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ನೀಡಿರುವ ಯೋಗದಾನವನ್ನು ಉದ್ದೇಶ ಪೂರ್ವಕ ನಿರ್ಲಕ್ಷಿಸಲಾಯಿತು. ಕಾಂಗ್ರೆಸನ ರಾಜಕೀಯದ ಷಡ್ಯಂತ್ರದ ಒಂದು ಭಾಗವೆಂದು ದೇಶದ ಸ್ವಾತಂತ್ರ್ಯದ ಸಂಪೂರ್ಣ ಶ್ರೇಯಸ್ಸನ್ನು ಅಹಿಂಸಾತ್ಮಕ ಆಂದೋಲನಕ್ಕೆ ನೀಡಿದೆ; ಆದರೆ ಆಜಾದ್ ಹಿಂದ ಸೇನೆಯ ಸೈನಿಕರ ಹೋರಾಟದಿಂದ ಬ್ರಿಟೀಷ ಸರಕಾರ ಹೆದರಿತ್ತು. ಆದ್ದರಿಂದ ಇನ್ನು ಮುಂದೆ ಭಾರತದ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟಸಾಧ್ಯವೆಂದು ಅರಿವು ಬ್ರಿಟಿಷ ಸರಕಾರಕ್ಕೆ ಆಗಿತ್ತು. ಈ ಹೇಳಿಕೆಗೆ ಪುಷ್ಟಿ ನೀಡುವ ಹಲವಾರು ದಾಖಲೆಗಳು ಉಪಲಬ್ಧವಿದೆ.
ನೇತಾಜಿ ಸುಭಾಷ ಚಂದ್ರ ಬೋಸ ಇವರ ಮೃತ್ಯುವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು.
ನೇತಾಜಿ ಸುಭಾಷ ಚಂದ್ರ ಬೋಸ ಇವರ ಮೃತ್ಯುವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು. ನೇತಾಜಿಯವರ ಮೃತ್ಯುಕ್ಕಿಂತ ಅವರ ಜೀವನ ಕಾರ್ಯ, ದೇಶಪ್ರೇಮದ ವಿಚಾರ ಎಷ್ಟೋ ದೊಡ್ಡದಾಗಿದೆ. ಅವರ ನೆನಪು ಇಟ್ಟುಕೊಳ್ಳುವ ಅವಶ್ಯಕತೆ ಇರುವುದಾಗಿ ಹೇಳಿದರು ಅನಿತಾ ಬೋಸ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments