Publish Date: Sun, 01 Jan 2023 (19:18 IST)
Updated Date: Sun, 01 Jan 2023 (19:20 IST)
ರಾಮನಗರ ತಾಲ್ಲೂಕಿನ ಹರಿಸಂದ್ರ-ತಿಮ್ಮೆಗೌಡನ ದೊಡ್ಡಿ ಸೇತುವೆ ಕುಸಿದು ಬಿದ್ದಿದೆ. ನಿನ್ನೆ ಸಂಜೆ 8 ಗಂಟೆ ಸುಮಾರಿಗೆ ಸೇತುವೆ ಕುಸಿದು ಬಿದ್ದಿದ್ದು. ಸೇತುವೆ ಮೇಲಿದ್ದ ಕಾರು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರನ್ನ ಗ್ರಾಮಸ್ಥರು ರಕ್ಷಿಸಿ ಪಾರು ಮಾಡಿದ್ದಾರೆ. ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಇದ್ದಾಗಿದ್ದು, ಸದ್ಯ ಹರಿಸಂದ್ರ ತಿಮ್ಮೇಗೌಡನದೊಡ್ಡಿ ರಸ್ತೆ ಸಂಪರ್ಕ ಬಂದ್ ಮಾಡಲಾಗಿದೆ.