ಕೊಳವೆ ಬಾವಿ ದುರಂತ: ಮುಂದುವರಿದ ರಕ್ಷಣಾ ಕಾರ್ಯ

Webdunia
ಭಾನುವಾರ, 23 ಏಪ್ರಿಲ್ 2017 (07:39 IST)
ಬೆಳಗಾವಿ: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕಿ ಕಾವೇರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸುಮಾರು 20 ಅಡಿ ಆಳದಲ್ಲಿ ಮಗುವಿನ ಬಟ್ಟೆ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

 
ಆಟವಾಡುತ್ತಿದ್ದ ಮಗು ನಿನ್ನೆ ಕೊಳವೆ ಬಾವಿಗೆ ಬಿದ್ದಿತ್ತು. ರಾತ್ರಿಯಿಂದಲೂ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ, ಕೊಳವೆ ಬಾವಿ ಪಕ್ಕದಲ್ಲೇ ಇನ್ನೊಂದು ಬಾವಿ ಕೊರೆಯಲಾಗುತ್ತಿದೆ. ಈಗಾಗಲೇ 12 ರಿಂದ 13 ಅಡಿ ಆಳದ ಗುಂಡಿ ಕೊರೆಯಲಾಗಿದೆ.

ಮಗುವಿನ ಸ್ಥಿತಿ ಗತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲ. ಮಗುವಿನ ತಾಯಿ ಸವಿತಾ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಜನ ಸಾಗರವೇ ಬೀಡು ಬಿಟ್ಟಿದೆ. ಮಗು ಮತ್ತಷ್ಟು ಕೆಳಕ್ಕೆ ಜಾರದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಪರಿಹಾರ ತಂಡ ತಿಳಿಸಿದೆ.

ಎನ್ ಡಿಆರ್ ಎಫ್ ಸಿಬ್ಬಂದಿ ಜತೆ, ಬೆಳಗಾವಿಯ ಸೇನಾ ನೆಲೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಸುಮಾರು 500 ಸಿಬ್ಬಂದಿಗಳು ನಿರಂತರ ಪ್ರಯತ್ನ ನಡೆಸಿದ್ದಾರೆ. ಕೊಳವೆ ಬಾವಿಯೊಳಗೆ ಮಗುವಿನ ರಕ್ಷಣೆಗೆ ಆಕ್ಸಿಜನ್ ಕೊಳವೆ ಇಳಿಬಿಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನದ ಸೇನಾಧಿಕಾರಿಯೋ, ಬೀದಿ ಕಾಮಣ್ಣನೋ..: ಮಹಿಳಾ ಪತ್ರಕರ್ತೆಗೆ ಪಬ್ಲಿಕ್ ನಲ್ಲಿ ಮಾಡಿದ್ದೇನು video

ಭಾರತದ ಅಕ್ಕಿಗೆ ಟ್ರಂಪ್ ಸುಂಕ: ನಮ್ಮದೇಶದ ಬಡವರಿಗೆ ಕೊಡ್ತೀವಿ ಬಿಡ್ರೀ ಎಂದ ಪಬ್ಲಿಕ್

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೇಳಿದಾಗ ಸದನದಲ್ಲಿ ಗ್ಗದಲವೋ ಗದ್ದಲ

ಮುಂದಿನ ಸುದ್ದಿ
Show comments