Select Your Language

Notifications

webdunia
webdunia
webdunia
webdunia

50 ರೂಪಾಯಿಗಾಗಿ ಯುವಕನ ಕೊಲೆ

50 ರೂಪಾಯಿಗಾಗಿ ಯುವಕನ ಕೊಲೆ
ಬೆಳಗಾವಿ , ಬುಧವಾರ, 28 ಸೆಪ್ಟಂಬರ್ 2016 (07:59 IST)
ಅವರಿಗೆಲ್ಲ ರಾತ್ರಿ ಕುಡಿದು ಮೋಜು,ಮಸ್ತಿ ಮಾಡೊ ಕೆಟ್ಟ ಚಾಳಿ. ಆದರೆ ಅವರ ಈ ದುರಭ್ಯಾಸ ಅಮಾಯಕನ ಪ್ರಾಣವನ್ನೇ ಹಿಂಡಿದೆ. ತನ್ನದಲ್ಲದ ತಪ್ಪಿಗೆ ಅಮಾಯಕನೊಬ್ಬ ದಾರುಣ ಅಂತ್ಯ ಕಂಡ ಹೃದಯವಿದ್ರಾವಕ ಕಥೆ ಇದು. 

ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್ 25ರಂದು ನಡೆದ ಘಟನೆ ಇದು. ರಾಮತೀರ್ಥ ನಗರದ ನಿವಾಸಿ ವಿಶಾಲ್ ಎಂಬಾತ ರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲಾ ಸ್ಟೇಡಿಯಂ ಬಳಿ ತನ್ನ ಸ್ನೇಹಿತಿಗಾಗಿ ಕಾಯುತ್ತಿದ್ದ. ರಾತ್ರಿಯಾಗಿದ್ದರಿಂದ ಜನಸಂಚಾರವೂ ವಿರಳವಾಗಿತ್ತು. ಇನ್ನೇನು ಸ್ನೇಹಿತ ಅಲ್ಲಿಗೆ ಬರಬೇಕು ಎನ್ನುವಷ್ಟರಲ್ಲಿ  ಆತನ ಬಳಿ ಬಂದ ನಾಲ್ವರು ಪುಂಡರು ಕುಡಿಯಲು ಹಣ ಬೇಕು ನೀಡು ಎಂದು ಒತ್ತಾಯಿಸಿದ್ದಾರೆ. ಆದರೆ ತನ್ನ ಬಳಿ ಕೇವಲ 50 ರೂಪಾಯಿ ಇದ್ದುದರಿಂದ ವಿಶಾಲ್ ಹಣ ಕೊಡಲು ನಿರಾಕರಿಸಿದ್ದಾನೆ. 
 
ಹೀಗಾಗಿ ಸಿಟ್ಟಿಗೆದ್ದ ದುಷ್ಕರ್ಮಿಗಳು ವಿಶಾಲನಿಗೆ ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ನೆಲಕ್ಕುರುಳಿದ ವಿಶಾಲ್ ಸ್ಥಳದಲ್ಲೇ ಪ್ರಾಣ ತ್ಯಜಿಸಿದ್ದಾನೆ.
 
ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರಿಂದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬುಲೆಟ್ ರೈಲನ್ನೇ ತಡೆದು ನಿಲ್ಲಿಸಿದ ಹಾವು