Webdunia - Bharat's app for daily news and videos

Install App

ಶಾಕಿಂಗ್ ಮಾಹಿತಿ ಹೊರಹಾಕಿದ ಬಿಎಂಟಿಸಿ ಸಂಸ್ಥೆ..!

geetha
ಶನಿವಾರ, 13 ಜನವರಿ 2024 (15:23 IST)
ಬೆಂಗಳೂರು- ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರದ್ದೆ ಹೆಚ್ಚು ಪ್ರಕರಣ ದಾಖಲಾಗಿದೆ.ಬೈಕ್ ಸವಾರರಿಂದಲೇ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.ಆರಟಿಓ ಅಧಿಕಾರಿಗಳ ನಿರ್ಲಕ್ಷದಿಂದಲೇ ಅಪಘಾತ ಸಂಖ್ಯೆಗಳು ಹೆಚ್ಚಳವಾಗಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ಮುಖ್ಯಸ್ಥರಾದ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
 
ಚಾಲನ ತರಬೇತಿ ನೀಡದೆ ಲೈಸನ್ಸ್ ನೀಡಲಾಗುತ್ತಿದೆ ಎಂದು ಆರಟಿಓ ವಿರುದ್ಧ ಬಿಎಂಟಿಸಿ ಗಂಭೀರ ಆರೋಪ ಮಾಡಿದೆ.
ಬಿಎಂಟಿಸಿಗೆ ಬೈಕ್ ಸವಾರರಿಂದಲೇ ಕಳಂಕ ಬರ್ತಿದೆ ಎಂದು ಬಿಎಂಟಿಸಿ ಆರೋಪ ಮಾಡಿದೆ.ವಿಲಿಂಗ್ ಹಾಗೂ ಲೈಸನ್ಸ್ ಇಲ್ಲದೆ ಬೈಕ್ ಓಡಿಸುವರ ಮೇಲೆ ಪೊಲೀಸರು ನಿಗಾ ಇಡಬೇಕು .ಅಕ್ಟೋಬರ್ ಒಂದೇ ತಿಂಗಳಲ್ಲಿ ಹತ್ತು ಬಿಎಂಟಿಸಿ ಹಾಗೂ ಬೈಕ್ ಅಪಘಾತ ಪ್ರಕರಣಗಳು ದಾಖಲಾಗಿವೆ.ಅಪಘಾತದಲ್ಲಿ 10 ಜನ ಬೈಕ್ ಸವಾರರು ಒಂದೇ ತಿಂಗಳಲ್ಲಿ ಮೃತಪಟ್ಟಿದ್ದಾರೆ.

ಆರಟಿಓಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೈಕ್ ಸವಾರಿಗೆ ಜಾಗೃತಿ ಮೂಡಿಸಬೇಕು.ನಗರದಲ್ಲಿನ ಬಿಎಂಟಿಸಿ ಬಸ್ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸುವ ಸಲುವಾಗಿ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ.ಈಗಾಗಲೇ ಬಿಎಂಟಿಸಿ ಚಾಲಕರಿಗೆ ಪೊಲೀಸರಿಂದ ಹಾಗೂ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ .ಹಂತ ಹಂತವಾಗಿ ಬಿಎಂಟಿಸಿ ಎಲ್ಲಾ ಚಾಲಕರಿಗೂ ಕೂಡ ತರಬೇತಿ ನೀಡಲಾಗುತ್ತದೆ ಬಿಎಂಟಿಸಿ ಮುಖ್ಯ ಸಂಚಾರ ಮುಖ್ಯಸ್ಥರಾದ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
 
ಬಿಎಂಟಿಸಿ ಏಳು ವಲಯದಲ್ಲಿ ಪ್ರತಿ ಶನಿವಾರ 50 ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ .ಬಿಎಂಟಿಸಿಯಲ್ಲಿ 50 ಡಿಪೋಗಳಿದ್ದು, ಪ್ರತಿಯೊಂದು ಡಿಪೋದಿಂದ ಪ್ರತಿ ಶನಿವಾರ ಒಬ್ಬರಂತೆ ಒಟ್ಟು 50 ಜನರಿಗೆ  ತರಬೇತಿ ನೀಡಲಾಗುತ್ತೆ.ಈಗಾಗಲೇ 1,400 ಚಾಲಕರಿಗೆ ತರಬೇತಿ ನೀಡಲಾಗಿದೆ .ನಿಂತಿರುವ ಬಸ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಸಾವಿಗೀಡಾಗುತ್ತಿದ್ದಾರೆ .ಇನ್ನು ಸಿಸಿಟಿವಿ ದೃಶ್ಯಗಗಳನ್ನ ಬಿಎಂಟಿಸಿ ಬಿಡುಗಡೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments