Webdunia - Bharat's app for daily news and videos

Install App

ಎನ್ ಪಿಎಸ್ ರದ್ಧತಿಗೆ ಆಗ್ರಹಿಸಿ ಸರಕಾರಿ ನೌಕರರು ಮಾಡಿದ್ದೇನು ಗೊತ್ತಾ?

Webdunia
ಬುಧವಾರ, 3 ಅಕ್ಟೋಬರ್ 2018 (15:27 IST)
ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿಂದು ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದಿಂದ ವಿನೂತನ ಪ್ರತಿಭಟನೆ ನಡೆಯಿತು.

ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಘೋಷ ವಾಕ್ಯದಡಿ ರಕ್ತದಾನ ಅಭಿಯಾನ ನಡೆಯಿತು. ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣಸ್ವಾಮೀಜಿ ರಕ್ತದಾನಕ್ಕೆ ಚಾಲನೆ ನೀಡಿದರು. ಸರ್ಕಾರಿ ನೌಕರಿ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ಜನವರಿ 1, 2004 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 2006 ಏಪ್ರಿಲ್ 4 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿಯನ್ನು ರದ್ದುಪಡಿಸಿ ಅದರ ಬದಲು ನೂತನ ಪಿಂಚಣಿ ಯೋಜನೆ ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ವಂತಿಗೆ ಆಧಾರಿತ ಪಿಂಚಣಿ ಯೋಜನೆಯ ಸಮಸ್ಯೆಗಳು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದ್ದು, ಅನೇಕ ನೌಕರರು ಈಗಾಗಲೇ ಮರಣ ಹೊಂದಿದ್ದಾರೆ. ಅವರ ಕುಟುಂಬಗಳು ಕಷ್ಟದ ಪರಿಸ್ಥಿತಿಗೆ ದೂಡಲ್ಪಟ್ಟಿರುವುದು ವಿಷಾದನೀಯ ಸಂಗತಿ ಎಂದರು.

ನೌಕರರ ಸಂಘದ ಸದಸ್ಯರಾದ ಡಾ.ರಾಜಶೇಖರ ಗಾಣಿಗೇರ, ಶಿವಾಜಿರಾವ್, ಶಿವಲಿಂಗಪ್ಪ ಹಂದಿಹಾಳು, ಎನ್.ರಮೇಶ, ಜಿ.ವೈ.ತಿಪ್ಪಾರೆಡ್ಡಿ, ಎ.ಎಸ್.ಭೂಮೇಶ್ವರ, ಬಿ.ಜಿ.ಶಿವಾನಂದ, ಕೆ.ಹೊನ್ನೂರುಸ್ವಾಮಿ ಇದ್ದರು.

ಜಿಲ್ಲೆಯ ಹೊಸಪೇಟೆ, ಸಂಡೂರು, ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನಾದ್ಯಂತ ಎನ್ ಪಿಎಸ್ ನೌಕರರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಅಂದಾಜು 6800 ಎನ್ ಪಿಎಸ್ ನೌಕರರಿದ್ದು, ಈವರೆಗೆ ನೂರಾರು ನೌಕರರು ರಕ್ತದಾನ ಮಾಡಿದ್ದಾರೆ. ಸರಿ ಸುಮಾರು 61,000 ಯುನಿಟ್ ರಕ್ತ ಸಂಗ್ರಹಿಸಿ ಗಿನ್ನಿಸ್ ದಾಖಲಿಸುವ ಗುರಿಯಿದೆ. ರಾಜ್ಯವ್ಯಾಪಿ 1,80,000 ನೌಕರರಿದ್ದು, ರಾಜ್ಯದೆಲ್ಲೆಡೆ ಒಂದು ಲಕ್ಷಕ್ಕೂ ಅಧಿಕ ನೌಕರರು ರಕ್ತದಾನ ಮಾಡುವ ಗುರಿಯನ್ನು ಹೊಂದಿದ್ದಾರೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರದ ಪ್ರತಿಯೊಂದ ನಿರ್ಧಾರಗಳನ್ನು ಮೋದಿಯೇ ಮಾಡಿದ್ದರಿಂದ ದೇಣಿಗೆ ವಿವಾದಕ್ಕೂ ಅವರೇ ಉತ್ತರಿಸಬೇಕು

ಭಾರತೀಯ ಮೂಲದ ಯುವತಿಯನ್ನು ಕೊಂದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಅರೆಸ್ಟ್‌

ಡಿಕ್ಕಿಯ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌, 40 ಮಂದಿಗೆ ಗಾಯ, Video

ಬಿಡದಿ ಪಾದಯಾತ್ರೆಗೆ ಇದಕ್ಕಿಂತ ಶ್ರೇಷ್ಠವಾದ ಆಶೀರ್ವಾದ ಬೇರೊಂದಿರಲು ಸಾಧ್ಯವಿಲ್ಲ, ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್‌: ಜಾಮೀನು ನೀಡಲು ಇಚ್ಛೆಯಿಲ್ಲದವರಿಗೆ ಒತ್ತಾಯವಿಲ್ಲ

ಮುಂದಿನ ಸುದ್ದಿ
Show comments