Select Your Language

Notifications

webdunia
webdunia
webdunia
webdunia

ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ..?

ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ..?
, ಗುರುವಾರ, 20 ಏಪ್ರಿಲ್ 2017 (11:11 IST)
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಯಾರಾದರೂ ವಾಮಾಚಾರ ಮಾಡಿಸಿದ್ದಾರಾ..? ಬೆಳಗಾವಿಯ ಕುವೆಂಪು ನಗರದಲ್ಲಿರುವ ಅವರ ನಿವಾಸದ ಬಳಿ ವಾಮಾಚಾರಕ್ಕೆ ಬಳಸಲಾಗುವ ವಸ್ತುಗಳು ಪತ್ತೆಯಾಗಿವೆ.

ಮನೆಯ ಮುಂದೆ ಮತ್ತು ಕಾರಿನ ಕೆಳಗೆ ವಾಮಾಚಾರಕ್ಕೆ ಬಳಸುತ್ತಾರೆ ಎನ್ನಲಾಗುವ ಅರಿಶಿನ-ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಬೂದಕುಂಬಳಕಾಯಿ, ಮೊಟ್ಟೆ, ಹಸಿಮೆಣಸಿನಕಾಯಿ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ಈ ಕುರಿತು, ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್, ನಾವು ವಾಮಾಚಾರವನ್ನ ನಂಬುವುದಿಲ್ಲ. ಆದರೂ ಕೆಲ ದಿನಗಳಿಂದ ನಡೆದಿರುವ ಘಟನೆಗಳು ನೋವುಂಟುಮಾಡಿವೆ, ಇತ್ತೀಚೆಗೆ ನನ್ನ ಸಹೋದರನ ಕಾರು ಮತ್ತು ನನ್ನ ಕಾರು ಅಪಘಾತಕ್ಕೀಡಾಗಿತ್ತು. ವಾಮಾಚಾರದಿಂದಲೇ ಈ ರೀತಿ ಆಗುತ್ತಿದೆಯಾ..? ಎಂಬ ಅನುಮಾನ ಮೂಡಿದ್ದು, ಮಾನಸಿಕ ಕಿರಿಕಿರಿಯಾಗುತ್ತಿದೆ. ನಮ್ಮ ರಾಜಕೀಯ ವಿರೋಧಿಗಳೇ ಮಾಡಿರಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಷ್ ಮನೆಗೆ ಸಿಎಂ ದಿಢೀರ್ ಭೇಟಿ: ಕುತೂಹಲ ಕೆರಳಿಸಿದ ಮಾತುಕತೆ