Select Your Language

Notifications

webdunia
webdunia
webdunia
webdunia

ಪರಿಷತ್ ಚುನಾವಣೆ ಮುಗಿದ ಬಳಿಕ ಬಿಜೆಪಿಗೆ ಕಾಡುತ್ತಿರುವುದು ಈಗ ಅದೊಂದೇ ಪ್ರಶ್ನೆ

Karnataka BJP
ಬೆಂಗಳೂರು: ನಿನ್ನೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ 11 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಅಡ್ಡ ಮತ ಹಾಕಿದವರು ಯಾರು ಎಂದು ಪತ್ತೆ ಮಾಡಲು ಬಿಜೆಪಿ ವಿಶೇಷ ತಂಡ ರಚಿಸಿದೆ.

ಕಾಂಗ್ರೆಸ್ ಗೆ ಹೆಚ್ಚುವರಿಯಾಗಿ 11 ಮತಗಳು ಬಿದ್ದಿವೆ. ಇದರಿಂದ ಸುಲಭವಾಗಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇತ್ತ ಬಿಜೆಪಿಯ ಎರಡು ಅಭ್ಯರ್ಥಿಗಳು ಗೆದ್ದರೆ ಜೆಡಿಎಸ್ ಅಭ್ಯರ್ಥಿ ಸೋತಿದ್ದಾರೆ. ಇದರ ಬೆನ್ನಲ್ಲೇ ಅಡ್ಡಮತ ಹಾಕಿದವರು ಯಾರು ಎಂಬ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.

ಹಲವು ಹೆಸರುಗಳು ಈ ನಡುವೆ ಹರಿದಾಡುತ್ತಿವೆ. ಇದರಲ್ಲಿ ಕೆಆರ್ ಪುರಂ ಶಾಸಕ ಭೈರತಿ ಬಸವರಾಜು, ಕೃಷ್ಣ ನಾಯಕ್, ಚಂದ್ರು ಲುಮಾಣಿ ಹೆಸರುಗಳು ಕೇಳಿಬಂದಿವೆ. ಆದರೆ ಈ ಶಾಸಕರು ಅಡ್ಡಮತ ಹಾಕಿದ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಳ್ಳಿ ಹಾಕಿದ್ದಾರೆ. ಇದೆಲ್ಲಾ ಬಿಜೆಪಿಯಲ್ಲಿ ಬೆಂಕಿ ಹಚ್ಚಲು ಕಾಂಗ್ರೆಸ್ ತೇಲಿಬಿಡುತ್ತಿರುವ ಹೆಸರುಗಳು ಎಂದಿದ್ದಾರೆ. ಇದರ ಜೊತೆಗೆ ಯಾರೆಲ್ಲಾ ಅಡ್ಡ ಮತ ಹಾಕಿದ್ದಾರೆ ಎಂದು ತಿಳಿಯಲು ಸಿಟಿ ರವಿ, ಕೊಳ್ಳೇಗಾಲದ ಮಾಜಿ ಶಾಸಕ ಮಹೇಶ್ ಮತ್ತು ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇದರೊಂದಿಗೆ ಸತ್ಯ ಹೊರಬೀಳಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

NEET ಪರೀಕ್ಷೆ ಬರೆಯಲು ಪೋಕ್ಸೋ ಆರೋಪಿಗೆ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು