Select Your Language

Notifications

webdunia
webdunia
webdunia
webdunia

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ: ಡಿ.ಎಚ್.ಶಂಕರ್‌ಮೂರ್ತಿ

ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ: ಡಿ.ಎಚ್.ಶಂಕರ್‌ಮೂರ್ತಿ
ಬೆಂಗಳೂರು , ಸೋಮವಾರ, 22 ಮೇ 2017 (13:49 IST)
ರಾಜ್ಯಪಾಲ ಹುದ್ದೆ ಸಿಗಲಿ ಅಥವಾ ಸಿಗದಿರಲಿ ಬಿಜೆಪಿ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ಹೇಳಿದ್ದಾರೆ.
 
ಈಶ್ವರಪ್ಪ, ಯಡಿಯೂರಪ್ಪ ಕಲಹದ ಬಗ್ಗೆ ನನಗೆ ಗೊತ್ತು. ಆದರೆ, ಸಭಾಪತಿಯಾಗಿ ಪಕ್ಷದ ಪರವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ತಿಳಿಸಿದ್ದಾರೆ. 
 
ಹಿಂದೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಅಸಮಾಧಾನವಿದ್ದಲ್ಲಿ ಪರಿಹಾರಕ್ಕಾಗಿ ನನ್ನ ಬಳಿ ಬರುತ್ತಿದ್ದರು. ಇದೀಗ ಅವರು ಕೇಳಿಲ್ಲ, ನಾನು ಹೇಳಿಲ್ಲ ಎಂದು ಹಾಸ್ಯ ಮಾಡಿದರು.
 
ಸಭಾಪತಿಯಾದ ನಂತರ ಸಕ್ರಿಯ ರಾಜಕೀಯದಿಂದ ದೂರವಾಗಿದ್ದೇನೆ. ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಪಾಲರ ಹುದ್ದೆ ನೀಡುವುದಾಗಿ ಹೇಳಿದ್ದಾರೆ. ಆದರೆ, ಎಲ್ಲಿ, ಯಾವಾಗ, ಎನ್ನುವ ಬಗ್ಗೆ ಅವರು ಹೇಳಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ದೋಷ ಪರಿಹಾರದ ನೆಪದಲ್ಲಿ ಮಹಿಳೆ ಮೇಲೆ 7 ಬಾರಿ ರೇಪ್