ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೇಳಿದಾಗ ಸದನದಲ್ಲಿ ಗ್ಗದಲವೋ ಗದ್ದಲ

Krishnaveni K
ಬುಧವಾರ, 10 ಡಿಸೆಂಬರ್ 2025 (11:19 IST)
ಬೆಂಗಳೂರು: ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂದು ಸದನದಲ್ಲೇ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಫೆಬ್ರವರಿ, ಮಾರ್ಚ್ ತಿಂಗಳದ್ದು ಬ್ಯಾಲೆನ್ಸ್ ಇಟ್ಟಿದ್ದೀರಿ. ಆಗಸ್ಟ್ ವರೆಗೆ ಹಾಕಿದ್ದೀರಿ ಅಂತೀರಿ. ಹಾಕಿದ್ದರೆ ಸೆಪ್ಟೆಂಬರ್, ಅಕ್ಟೋಬರ್, ನವಂಬರ್ ನದ್ದು ಯಾಕೆ ಬಾಕಿ ಇಟ್ಟಿದ್ದೀರಿ ಎಂದೂ ತಿಳಿಸಿ ಎಂದು ಮಹೇಶ್ ಟೆಂಗಿನಕಾಯಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ನಾವು ಪ್ರತೀ ತಿಂಗಳೂ ಕೂಡಾ ಫೈನಾನ್ಸ್ ಡಿಪಾರ್ಟ್ ಮೆಂಟ್ ಗೆ ಫೈಲ್ ಕಳುಹಿಸ್ತೀವಿ. ಇದುವರೆಗೆ ಎಲ್ಲವೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದೇವೆ. ಫಿನಾನ್ಸ್ ಡಿಪಾರ್ಟ್ ಮೆಂಟ್ ನಮಗೆ ಕೊಡ್ತಾರೆ, ಒಂದು ನಿಮಿಷ ತಡಮಾಡದೇ ಹಾಕಿದ್ದೇವೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಯಾಕೆ ಕೊಟ್ಟಿಲ್ಲ ಅದನ್ನು ಮೊದಲು ಹೇಳ್ರೀ ಎಂದು ಶಾಸಕರು ಕೇಳಿದಾಗ, ಸಚಿವೆ ಹೆಬ್ಬಾಳ್ಕರ್ ಮಹಾರಾಷ್ಟ್ರದ ಉದಾಹರಣೆ ಎಳೆದು ತಂದರು. ಆಗ ಬಿಜೆಪಿ ಶಾಸಕರು, ನಮಗೆ ಬೇರೆ ರಾಜ್ಯದ ಉದಾಹರಣೆ ಬೇಕಾಗಿಲ್ಲ. ಅಲ್ಲಿನದ್ದು ಅವರು ನೋಡಿಕೊಳ್ಳುತ್ತಾರೆ. ಇಲ್ಲಿನ ವಿಚಾರ ಹೇಳ್ರೀ ಎಂದರು.

ಆಗ ರೊಚ್ಚಿಗೆದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಯೋಜನೆಯಿಂದ ಎಷ್ಟು ಮಹಿಳೆಯರಿಗೆ ಅನುಕೂಲವಾಗಿದೆ ಎಂಬ ಬಗ್ಗೆ ನಿಮಗೇನಾದರೂ ಮಾಹಿತಿ ಇದೆಯಾ? ಈ ಯೋಜನೆಯನ್ನು ವಿರೋಧಿಸಿದವರು ನೀವು. ಈಗ ಇದ್ದಕ್ಕಿದ್ದಂತೆ ಮಹಿಳೆಯರ ಬಗ್ಗೆ ಕಾಳಜಿ  ಬಂದು ಬಿಡ್ತಾ ಎಂದು ತಿರುಗೇಟು ನೀಡಿದರು. ಈ  ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲವೇರ್ಪಟ್ಟಿತು. ಬಳಿಕ ಸ್ಪೀಕರ್ ಮಧ್ಯಪ್ರವೇಶಿಸಿ ತಣ್ಣಗಾಗಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಇನ್ನಿಲ್ಲ

ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆಯಲು ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ

ಡಿಕೆ ಶಿವಕುಮಾರ್ ಮೇಲೆ ಹೈಕಮಾಂಡ್ ಇಂಪ್ರೆಸ್ ಮಾಡಲು ಇದೊಂದು ವಿಷಯ ಸಾಕು

ಸಿದ್ದು ಡಿಕೆಶಿ ನಡುವೆ ತಣ್ಣಗಾಗಿದ್ದ ಸಿಎಂ ಕುರ್ಚಿ ಫೈಟ್ ಮತ್ತೆ ಭುಗಿಲೇಳಲು ಈ ಒಬ್ಬರೇ ಕಾರಣ

Karnataka Weather: ಕರ್ನಾಟಕದಲ್ಲಿ ಇಂದು ಹೇಗಿರಲಿದೆ ಹವಾಮಾನ ಇಲ್ಲಿದೆ ವರದಿ

ಮುಂದಿನ ಸುದ್ದಿ
Show comments