Select Your Language

Notifications

webdunia
webdunia
webdunia
webdunia

ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ

ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ
ದಾವಣಗೆರೆ , ಗುರುವಾರ, 11 ಜುಲೈ 2019 (18:05 IST)
ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಅಂತ ಕೈ ಪಡೆ ಹೇಳುತ್ತಿದೆ.

ನನ್ನನ್ನು ಬಿಜೆಪಿಯವರು ಸಂಪರ್ಕಿಸಿದ್ದರು. ಆದರೆ ನಾನು ಅವರ ಲಾಬಿಗೆ ಮಣಿದಿಲ್ಲ. ಹೀಗಂತ ಕಾಂಗ್ರೆಸ್ ಶಾಸಕರೊಬ್ಬರು ಹೇಳುವ ಮೂಲಕ ತೆರೆಮರೆಯಲ್ಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದೆ ಎನ್ನೋದನ್ನ ಬಹಿರಂಗಪಡಿಸಿದ್ದಾರೆ.

ನಾನು ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡಲ್ಲ. ಹೀಗಂತ ದಾವಣಗೆರೆಯಲ್ಲಿ ಹರಿಹರ ಶಾಸಕ ಎಸ್. ರಾಮಪ್ಪ ಹೇಳಿಕೆ ನೀಡಿದ್ದಾರೆ.

ಹರಿಹರದ ಕಾಂಗ್ರೆಸ್ ಶಾಸಕ ರಾಮಪ್ಪ, ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ ಎಂದರು. ಆದ್ರೆ ಸಿಎಂ ಬದಲಾವಣೆಯಾಗತ್ತೆ ಎಂದು ಒತ್ತಿ ಹೇಳಿದ್ರು. ಇದೆಲ್ಲವನ್ನು ಬಿಜೆಪಿಯವರೆ ಮಾಡಿದ್ದಾರೆ. ಒಂದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದಾರೆ.

ಇಂದು ನನಗೂ ಪೋನ್ ಮಾಡಿದ್ದರು. ನಾನು ಯಾವುದೇ ಹಣ, ಅಧಿಕಾರಕ್ಕೆ ಮನಸೋತಿಲ್ಲ ಎಂದ್ರು.ನನಗೆ ಕ್ಷೇತ್ರದ ಜನರು ಮುಖ್ಯ. ನಾನು ಅವರಿಗೆ ಗೌರವ ನೀಡುತ್ತೇನೆ ಅಂತ ದಾವಣಗೆರೆಯಲ್ಲಿ ಶಾಸಕ ರಾಮಪ್ಪ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಶಾಸಕರ ಹೈಡ್ರಾಮಾ ನಡುವೆ ಕಂಗಾಲಾದ ರೈತರು