Select Your Language

Notifications

webdunia
webdunia
webdunia
webdunia

ಅಮಿತ್ ಷಾ ಸ್ವಾಗತಕ್ಕೆ ಓಡೋಡಿ ಬಂದ ಬಿಜೆಪಿ ನಾಯಕರು

ಅಮಿತ್ ಷಾ ಸ್ವಾಗತಕ್ಕೆ ಓಡೋಡಿ ಬಂದ ಬಿಜೆಪಿ ನಾಯಕರು
ಬೆಂಗಳೂರು , ಶನಿವಾರ, 12 ಆಗಸ್ಟ್ 2017 (11:08 IST)
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಬಂದಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ಬಿಜೆಪಿ ನಾಯಕರ ದಂಡೇ ವಿಮಾನ ನಿಲ್ದಾಣಕ್ಕೆ ದೌಡಾಯಿಸಿತು.


ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಎಸ್ ಎಂ ಕೃಷ್ಣ ಸೇರಿದಂತೆ ಘಟಾನುಘಟಿ ನಾಯಕರೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಅಧ್ಯಕ್ಷರನ್ನು ಸ್ವಾಗತಿಸಿದರು.

ಈ ವೇಳೆ ಅಮಿತ್ ಷಾಗೆ ಮೈಸೂರು ಪೇಟ, ಶಲ್ಯ, ಹಾರ ಹಾಕಿ ಸ್ವಾಗತಿಸಲಾಯಿತು ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ. ಬಿಜೆಪಿ ನಾಯಕರೊಂದಿಗೆ ಚುನಾವಣೆಗೆ ಸಿದ್ಧತೆಯಾಗಿ ಸಭೆ ನಡೆಸಲಿರುವ  ಅಮಿತ್ ಷಾ ಎದುರಿಗೆ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಈ ಸಭೆಯಲ್ಲಿ ಯಾವುದೇ ಅಸಮಾಧಾನಗಳನ್ನು ಹೇಳುವಂತಿಲ್ಲ ಎಂದು ಈಗಾಗಲೇ ಹುಕುಂ ಹೊರಡಿಸಲಾಗಿದೆ.

ಈ ನಡುವೆ ಅಮಿತ್ ಷಾ ಬೆಂಗಾವಲು ಪಡೆ ಮತ್ತು ಭದ್ರತಾ ಅಧಿಕಾರಿಗಳ ನಡುವೆ ವಾಗ್ವಾದವಾದ ಘಟನೆಯೂ ನಡೆಯಿತು. ಬೆಂಗಾವಲು ಪಡೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ಭದ್ರತಾ ಪಡೆಗಳೊಂದಿಗೆ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿತೀಶ್ ಹಾದಿ ಹಿಡಿತಾರಾ ಶರದ್ ಪವಾರ್?