Select Your Language

Notifications

webdunia
webdunia
webdunia
webdunia

ದಲಿತರ ಬಗ್ಗೆ ಗೌರವವಿಲ್ಲ, ದಲಿತರ ಬಗ್ಗೆ ಕಾಳಜಿಯಿಲ್ಲ: ಸಿಎಂ ಸಿದ್ದರಾಮಯ್ಯ

ದಲಿತರ ಬಗ್ಗೆ ಗೌರವವಿಲ್ಲ, ದಲಿತರ ಬಗ್ಗೆ ಕಾಳಜಿಯಿಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು , ಶನಿವಾರ, 20 ಮೇ 2017 (16:12 IST)
ಬಿಜೆಪಿಯವರಿಗೆ ದಲಿತರ ಬಗ್ಗೆ ಗೌರವವಿಲ್ಲ, ದಲಿತರ ಬಗ್ಗೆ ಕಾಳಜಿಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂಸದೆ ಶೋಭಾ ಕರಂದ್ಲಾಜೆ, ದಲಿತರ ಮನೆಗೆ ತೆರಳಿ ಹೋಟೆಲ್ ಉಪಹಾರ ಸೇವಿಸಿರುವುದು ನೋಡಿದಲ್ಲಿ ಅವರಿಗೆ ದಲಿತರ ಬಗ್ಗೆ ಎಂತಹ ಗೌರವಿದೆ ಎಂತಹ ಕಾಳಜಿಯಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.
 
ದಲಿತರ ಓಟು ಬರುತ್ತದೆ ಎನ್ನುವ ಆಸೆಯಿಂದ ದಲಿತರ ಮನೆಗೆ ಬಿಜೆಪಿ ನಾಯಕರು ತೆರಳುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ಅಸಹನೆಯಿದೆ ಎಂದು ಕಿಡಿಕಾರಿದರು.
 
ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿರುವ ಯಡಿಯೂರಪ್ಪ, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ನಿರಾಕರಿಸಿದ್ದರು. ನನ್ನ ಬಳಿ ನೋಟು ತಯಾರಿಸುವ ಮಿಷನ್ ಇಲ್ಲ ಎಂದಿದ್ದರು. ಇದೀಗ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಪರಿಷತ್ 8 ಸದಸ್ಯರ ವಿರುದ್ಧ ಸಭಾಪತಿಗೆ ದೂರು