Select Your Language

Notifications

webdunia
webdunia
webdunia
webdunia

ಎಫ್‌ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ: ಸಿಎಂ ವ್ಯಂಗ್ಯ

ಎಫ್‌ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ: ಸಿಎಂ ವ್ಯಂಗ್ಯ
ಬೆಂಗಳೂರು , ಭಾನುವಾರ, 20 ಆಗಸ್ಟ್ 2017 (12:26 IST)
ಎಫ್‌ಐಆರ್ ದಾಖಲಾಗಿರುವವರ ಪರ ಬಿಜೆಪಿ ಹೋರಾಟ ಮಾಡುತ್ತಿದೆ. ಇದು ಎಂತಹ ಹೋರಾಟವೆಂದು ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸರಕಾರದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಹೋರಾಟ ಎಂತಹದು ಎಂದು ಹೇಳಲಿ. ಆರೋಪಿಗಳ ಪರ ಬಿಜೆಪಿ ಹೋರಾಟ ಮಾಡುತ್ತಾ, ಬಿಜೆಪಿ ತನ್ನ ಮುಖವಾಡವನ್ನು ಬಯಲುಗೊಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ ದೂರು ಬಂದಿದ್ದರಿಂದ ಎಫ್‌ಐಆರ್ ಆಗಿದೆ ಅಷ್ಟೆ. ಇದರಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಕೇಂದ್ರ ಸರಕಾರ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದೆ. ಕಾಂಗ್ರೆಸ್ ಪಕ್ಷ ಅಂತಹ ಹೀನ ಸಂಸ್ಕ್ರತಿಯನ್ನು ಹೊಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ 2018ರ ಚುನಾವಣೆಗೆ ಅಖಾಡಾ ಸಿದ್ದಪಡಿಸಿಕೊಳ್ತಿದೆ: ದೇವೇಗೌಡ