Webdunia - Bharat's app for daily news and videos

Install App

ಬಿಜೆಪಿ ಅಭ್ಯರ್ಥಿ ರೌಡಿ ಶೀಟರ್

Webdunia
ಮಂಗಳವಾರ, 26 ಮಾರ್ಚ್ 2019 (14:57 IST)
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿ ಸ್ವಾಮಿಗಿಂತ ಪತ್ನಿಯೇ ಶ್ರೀಮಂತೆಯಾಗಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾಗಿರುವ ಮುನಿಸ್ವಾಮಿ ಪ್ರವೃತ್ತಿಯಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದಾರೆ.

ಮುನಿಸ್ವಾಮಿ ಬಳಿ 64.20 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತ್ನಿ ಎಂ.ಶೈಲಜಾ ಅವರು 1.03 ಕೋಟಿ ಮತ್ತು ಮಕ್ಕಳ ಬಳಿ 15.92 ಲಕ್ಷ ಮೌಲ್ಯದ ಚರಾಸ್ತಿ ಇದೆ.

ಮುನಿಸ್ವಾಮಿ ಬಳಿ 8.60 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ ಬಳಿ 7.01 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಮುನಿಸ್ವಾಮಿ ಪತ್ನಿ ಶೈಲಜಾ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ 75 ಲಕ್ಷ ಹೂಡಿಕೆ ಮಾಡಿದ್ದಾರೆ. ಮುನಿಸ್ವಾಮಿ 75 ಲಕ್ಷ ಮತ್ತು ಶೈಲಜಾ 1.23 ಕೋಟಿ ಸಾಲ ಮಾಡಿಕೊಂಡಿದ್ದಾರೆ. ಮುನಿಸ್ವಾಮಿ 15 ಲಕ್ಷ, ಪತ್ನಿ ಎಂ.ಶೈಲಜಾ 9 ಲಕ್ಷ, ಮಕ್ಕಳಾದ ಎಂ.ವೈಷ್ಣವಿ ಮತ್ತು ಎಂ.ಹರ್ಷಿತಾ ಬಳಿ 1.60 ಲಕ್ಷ ನಗದು ಇದೆ.

ಮುನಿಸ್ವಾಮಿ ಕುಟುಂಬದವರು ಮುನಿಸ್ವಾಮಿ ವಿವಿಧ ಬ್ಯಾಂಕ್ ಗಳಲ್ಲಿ, ಆರೋಗ್ಯ ವಿಮೆಯಲ್ಲಿ, ಅಂಚೆ ಕಚೇರಿಯಲ್ಲಿ ಲಕ್ಷಾಂತರ ರುಪಾಯಿ ಠೇವಣಿ ಇಟ್ಟಿದ್ದಾರೆ. ಮುನಿಸ್ವಾಮಿ, ಅವರ ಪತ್ನಿಯು ಜಮೀನು ಖರೀದಿಗಾಗಿ 15.10 ಲಕ್ಷ ಮುಂಗಡ ಹಣ ಕೊಟ್ಟಿದ್ದಾರೆ.
ಮುನಿಸ್ವಾಮಿ ಬಳಿ 9 ಲಕ್ಷದ ಕಾರು ಮತ್ತು 70 ಸಾವಿರ ಮೌಲ್ಯದ ಬೈಕ್‌, ಪತ್ನಿ ಹೆಸರಿನಲ್ಲಿ 52 ಲಕ್ಷ ಬೆಲೆ ಬಾಳುವ 2 ಕಾರು, 5 ಲಕ್ಷದ ಎರಡು ಟ್ರ್ಯಾಕ್ಟರ್‌ ಹಾಗೂ 60 ಸಾವಿರ ಮೌಲ್ಯದ ಬೈಕ್‌ ಇದೆ. ಮುನಿಸ್ವಾಮಿ ಬಳಿ 18 ಲಕ್ಷ ಬೆಲೆ ಬಾಳುವ 600 ಗ್ರಾಂ ಚಿನ್ನಾಭರಣ ಮತ್ತು 1.90 ಲಕ್ಷ ಮೌಲ್ಯದ 4 ಕೆ.ಜಿ ಬೆಳ್ಳಿ ಆಭರಣಗಳಿವೆ. 

ಪತ್ನಿ ಶೈಲಜಾ  ಬಳಿ 27 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣ ಹಾಗೂ 2.85 ಲಕ್ಷ ಬೆಲೆ ಬಾಳುವ 6 ಕೆ.ಜಿ ಬೆಳ್ಳಿ ಆಭರಣಗಳಿವೆ.

ಮಕ್ಕಳ ಬಳಿ 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ, 5 ಲಕ್ಷ ಬೆಲೆ ಬಾಳುವ 250 ಗ್ರಾಂ ವಜ್ರಾಭರಣಗಳಿವೆ.
ಮುನಿಸ್ವಾಮಿ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಅಟ್ರಾಸಿಟಿ ಮತ್ತು ರೌಡಿ ಶೀಟರ್ ಪ್ರಕರಣಗಳಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ಮುಂದಿನ ಸುದ್ದಿ
Show comments