Select Your Language

Notifications

webdunia
webdunia
webdunia
webdunia

ದಶಪಥದಲ್ಲಿ ಬೈಕ್ಗಳ ಓಡಾಟಕ್ಕೆ ಅನುಮತಿ ಇಲ್ಲ : ಪ್ರತಾಪ್ ಸಿಂಹ

ದಶಪಥದಲ್ಲಿ ಬೈಕ್ಗಳ ಓಡಾಟಕ್ಕೆ ಅನುಮತಿ ಇಲ್ಲ : ಪ್ರತಾಪ್ ಸಿಂಹ
ಮೈಸೂರು , ಶನಿವಾರ, 7 ಜನವರಿ 2023 (08:03 IST)
ಮೈಸೂರು : ಬೆಂಗಳೂರು – ಮೈಸೂರು ನಡುವಿನ ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಗೊಳಿಸಲಾಗುತ್ತದೆ ಎಂಬ ಸಿಹಿ ಸುದ್ದಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನಿನ್ನೆಯಷ್ಟೇ ನೀಡಿದ್ರು.

ಇದೀಗ, ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಸಂಚರಿಸಲು ಅವಕಾಶವಿರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ವಿಸ್ ರಸ್ತೆ ನಿರ್ಮಾಣವಾದ ಮೇಲೆ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನಗಳಿಗೆ ಹೈವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರಲ್ಲ.

ಅಪಘಾತ ಮುಕ್ತ ಎಕ್ಸ್ಪ್ರೆಸ್ ವೇ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.  ಇನ್ನೂ ಹೈವೇಗೆ ಏಕೆ `ಕಾವೇರಿ ಎಕ್ಸ್ಪ್ರೆಸ್ ವೇ’ ಎಂದು ಹೆಸರಿಡೋಕೆ ಹೇಳಿದೆ ಎಂಬ ಬಗ್ಗೆ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರಂ ನ ಗಲ್ಲಿ ಗಲ್ಲಿ ಯಲ್ಲೂ ವೀಕ್ಷಣೆ ಮತ್ತು ಪರಿಶೀಲನೆ