Webdunia - Bharat's app for daily news and videos

Install App

ನಾನ್ಯಾಕೆ ಹಾಸನ ಬಿಟ್ಟು ಹೋಗ್ಲಿ, ಇಲ್ಲಿನ ಜನ ನಮ್ಮ ಕುಟುಂಬಕ್ಕೆ ಸಹಕರಿಸಿದ್ದಾರೆ: ಭವಾನಿ ರೇವಣ್ಣ

Krishnaveni K
ಸೋಮವಾರ, 7 ಏಪ್ರಿಲ್ 2025 (15:56 IST)
ಹಾಸನ: ಕೋರ್ಟ್ ಅನುಮತಿ ಪಡೆದು ಹಾಸನಕ್ಕೆ ಇಂದು ಮೊದಲ ಭಾರಿಗೆ ಭೇಟಿ ನೀಡಿರುವ ಭವಾನಿ ರೇವಣ್ಣ ನಾನು ಯಾಕೆ ಹಾಸನಕ್ಕೆ ಬಿಟ್ಟು ಹೋಗ್ಲಿ, ಇಲ್ಲಿನ ಜನ ನಮ್ಮ ಕುಟುಂಬಕ್ಕೆ ಇದುವರೆಗೂ ಸಹಕರಿಸಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

ಹಾಸನಕ್ಕೆ ಈವತ್ತು ನಾನು ಬರ್ತೀನಿ ಎಂದು ಯಾರಿಗೂ ಹೇಳಿರಲಿಲ್ಲ. ಹಾಗಿದ್ದರೋ ಎಷ್ಟೋ ಜನ ಹೇಗೋ ತಿಳ್ಕೊಂಡು ನನ್ನ ನೋಡಕ್ಕೆ ಬಂದ್ರು. ಹಾಸನ ಜನ ಮೊದಲಿನಿಂದಲೂ ಒಳ್ಳೆಯದೇ ಮಾಡಿದ್ದಾರೆ. ನಾನೂ ನನ್ನಿಂದಾಗುವಷ್ಟು ಒಳ್ಳೆಯದೇ ಮಾಡ್ತೀನಿ ಎಂದಿದ್ದಾರೆ.

ಹಾಸನ ಜನತೆಗೆ ನಾವು ಯಾವತ್ತೂ ಚಿರಋಣಿಯಾಗಿರ್ತೀನಿ. ನಾನು ಯಾವತ್ತೂ ಹಾಸನ ಜನರಿಂದ ದೂರ ಉಳಿಯಲ್ಲ. ಎಲ್ಲರಿಗೂ ಗೊತ್ತು, ನನಗೆ, ನಮ್ಮ ಕುಟುಂಬಕ್ಕೆ ನಮ್ಮ ಮಾವನವರು ದೇವೇಗೌಡರ ಕಾಲದಿಂದ, ನನ್ನ ಮನೆಯವರು ರೇವಣ್ಣ, ಮಕ್ಕಳ ಜೊತೆಗೂ ಹಾಸನ ಜೊತೆ ಸಹಕರಿಸುತ್ತಲೇ ಬಂದಿದ್ದಾರೆ. ಹೀಗಾಗಿ ನಾವೂ ಅವರ ಕೈ ಬಿಡಲ್ಲ ಎಂದಿದ್ದಾರೆ.

ಇನ್ನು, ಇಂದು ಯಾವುದೇ ರಾಜಕೀಯ ಮಾತನಾಡಲ್ಲ ಎಂದೂ ಹೇಳಿದ್ದಾರೆ. ಇಷ್ಟು ದಿನ ಹಾಸನಕ್ಕೆ ಬರದೇ ಇದ್ದರೂ ಇಲ್ಲಿಂದ ಫೋನ್ ಕರೆಗಳು ಬರ್ತಿದ್ದವು. ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಈಗ ಮತ್ತೆ ಬರಲು ಸಾಧ್ಯವಾಗಿರುವುದು ಸಂತೋಷವಾಗಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments