Select Your Language

Notifications

webdunia
webdunia
webdunia
webdunia

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಜಾಮೀನು ಅರ್ಜಿ ತಿರಸ್ಕೃತ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಜಾಮೀನು ಅರ್ಜಿ ತಿರಸ್ಕೃತ
ಉಡುಪಿ , ಗುರುವಾರ, 29 ಡಿಸೆಂಬರ್ 2016 (08:54 IST)
ಆನಿವಾಸಿ ಭಾರತೀಯ, ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಮೊದಲ ಆರೋಪಿ, ಮೃತನ ಪತ್ನಿ  ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
 

 
ಆರೋಪಿ ಪರ ವಕೀಲ ಅರುಣ್ ಬಂಗೇರ ಮತ್ತು ಸರ್ಕಾರಿ ವಿಶೇಷ ಅಭಿಯೋಜಕ ಶಾಂತಾರಾಮ್ ಶೆಟ್ಟಿ ವಾದ- ಪ್ರತಿವಾದ ಆಲಿಸಿದ  ನ್ಯಾಯಾಧೀಶ ಟಿ.ವೆಂಕಟೇಶ್ ಜಾಮೀನು ನೀಡಲು ನಿರಾಕರಿಸಿದರು.
 
ಸೌದಿ ಅರೇಬಿಯಾದಲ್ಲಿದ್ದ ಉದ್ಯಮಿ ಭಾಸ್ಕರ್‌ ಶೆಟ್ಟಿ ಕಳೆದ ಜುಲೈನಲ್ಲಿ ತಮ್ಮ ಸ್ವಂತ ಊರು ಉಡುಪಿಗೆ ಬಂದಾಗ ನಾಪತ್ತೆಯಾಗಿದ್ದರು.  ತನಿಖೆ ನಡೆಸಿದ ಪೊಲೀಸರಿಗೆ ಅವರ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ರಾಜೇಶ್ವರಿ, ಪುತ್ರ ನವನೀತ್, ಜ್ಯೋತಿಷಿ ನಿರಂಜನ ಭಟ್‌ ಅವರನ್ನು ಪೊಲೀಸರು ಬಂಧಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾವಿ ರಾಜಕಾರಣಿಯ ಆಶ್ರಯದಲ್ಲಿ ಭ್ರಷ್ಟ ಅಧಿಕಾರಿ ಚಿಕ್ಕರಾಯಪ್ಪ?