Webdunia - Bharat's app for daily news and videos

Install App

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರು ಎಚ್ಚರ!

Webdunia
ಗುರುವಾರ, 30 ಜೂನ್ 2022 (13:45 IST)
ರಾಯಚೂರು : ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಗಳು ಆಗಿವೆ. ನಿತ್ಯವೂ ನೂರಾರು ಹೊಸ ಹೊಸ ಆ್ಯಪ್ ಗಳು ಬರುತ್ತಿವೆ.

ಮೆಸೇಜ್ ಮಾಡಿ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂಬ ಹತ್ತಾರು ಸಂದೇಶಗಳು ಬರುತ್ತವೆ. ಕೆಲ ದುಷ್ಟ ಅನಾಮಿಕರು  ಹಣದಾಸೆ ತೋರಿಸಿ ಮೋಸ ಮಾಡುವುದೇ ದಂಧೆ ಮಾಡಿಕೊಂಡಿದ್ದಾರೆ.

ನೀವೂ ಬಂದಿರುವ ಮೆಸೇಜ್ ನೋಡಿ ಯಾವುದ್ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಂಡ್ರೆ, ಲಕ್ಷ ಲಕ್ಷ ಹಣದ ಜೊತೆಗೆ ಮಾನವೂ ಹೋಗೋದು ಗ್ಯಾರೆಂಟಿ ಆಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನ ಬ್ಲಾಕ್ ಮಾಡುತ್ತಿದ್ದಾರೆ ಎಂಬುವುದು ನಾವು ದಿನಾ ಕೇಳ್ತಾನೇ ಇರ್ತೀವಿ. ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ಪರಿಚಯನೇ ಇಲ್ಲದವ್ರು ವಿಡಿಯೋ ಕಾಲ್ ಮಾಡಿ, ಆಮೇಲೆ ಹಣಕ್ಕೆ ಡಿಮ್ಯಾಂಡ್ ಮಾಡೋ ದಂಧೆಯೂ ಜೋರಾಗಿ ನಡೆದಿದೆ.

ಇಂತಹದೇ ಜಾಲವೊಂದಕ್ಕೆ ಸಿಲುಕಿದ ರಾಯಚೂರು ಜಿಲ್ಲೆಯ ದೇವದುರ್ಗದ ಯುವಕ ಮೈನುದ್ದೀನ್ ಈಗ ಪರದಾಟ ನಡೆಸಿದ್ದಾನೆ. ಚೈನೀಸ್ ಆ್ಯಪ್ ಗಳ ಮೂಲಕ ಲೋನ್ ಆಮಿಷ ತೋರಿಸಿ ಲಕ್ಷಾಂತರ ಹಣ ವಸೂಲಿ ಮಾಡಿರುವ ಭಯಾನಕ ಘಟನೆವೊಂದು ತಡವಾಗಿ  ಬೆಳಕಿಗೆ ಬಂದಿದೆ.

ಯುವಕ ಮೈನುದ್ದೀನ್ ಗೆ ಆರಂಭದಲ್ಲಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಸ್ಕೀಮ್ ನಲ್ಲಿ ನಿಮಗೆ ಲೋನ್ ಬಂದಿದೆ ಎಂದು ಕರೆ ಬರುತ್ತೆ. ಕರೆ ಮಾಡಿ ಕನ್ಫರ್ಮ್ ಮಾಡಿಕೊಳ್ಳೋದಕ್ಕೆ ಅಂತಾ ಕರೆ ಮಾಡಿದ್ದ ಐನಾತಿಗಳೇ ಒಂದು ಸಾವಿರ ಆತನ ಅಕೌಂಟ್ ಗೆ ಹಾಕ್ತಾರೆ. ಮೈನುದ್ದೀನ್ ಖಾತೆಗೆ ಒಂದು ಸಾವಿರ ರೂಪಾಯಿ ಬಂದಿದೆ ಎಂದು ಖುಷಿ ಆಗಿದ್ದ, ಆದ್ರೆ ಖದೀಮರು ಮಾರನೇ ದಿನದಿಂದಲೇ ಬ್ಲಾಕ್ ಮೇಲೆ ಮಾಡೋದಕ್ಕೆ ಶುರು ಮಾಡಿದರು.

ನಿನಗೆ 1 ಸಾವಿರ ರೂಪಾಯಿ ಹಾಕಿದ್ದೇನೆ. ನೀನು ಒಂದು ಸಾವಿರ ರೂಪಾಯಿಗೆ 40% ಬಡ್ಡಿ ಕಟ್ಟುವಂತೆ ತಕರಾರು ಮಾಡ್ತಾರೆ. ಆಗ ಯುವಕ ಬಡ್ಡಿ ಕಟ್ಟಲು ಹಿಂದೇಟು ಹಾಕುತ್ತಾನೆ. ಆಗ  ಖದೀಮರು ಬ್ಲಾಕ್ ಮೇಲ್ ಮಾಡೋದಕ್ಕೆ ಮುಂದಾಗಿ ಆತನ ಮೊಬೈಲ್ ನ ಗ್ಯಾಲರಿಯಲ್ಲಿ ಇರುವ ಫೋಟೋಗಳಿಗೆ ಅಶ್ಲೀಲ ಪೋಟೋ ಎಡಿಟ್ ಮಾಡಿ ಭಯಬೀಳಿಸುವ ರೀತಿಯಲ್ಲಿ ಮೆಸೇಜ್ ಹಾಕಲು ಶುರು ಮಾಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments