Select Your Language

Notifications

webdunia
webdunia
webdunia
webdunia

ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬೆಟ್ಟೇಗೌಡ ಆಯ್ಕೆ!

ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬೆಟ್ಟೇಗೌಡ ಆಯ್ಕೆ!
ಬೆಂಗಳೂರು , ಬುಧವಾರ, 18 ಜನವರಿ 2017 (15:56 IST)
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಬೆಟ್ಟೇಗೌಡರು ಆಯ್ಕೆಯಾಗಿದ್ದಾರೆ.
 
ಒಕ್ಕಲಿಗರ ಸಂಘದ ಚುನಾವಣೆಯ ಕೊನೆ ಕ್ಷಣದಲ್ಲಿ ಅಚ್ಚರಿಯ ಬೆಳವಣೆಗೆ ಆಗಿದ್ದು, ಹಾಲಿ ಅಧ್ಯಕ್ಷ ಅಪ್ಪಾಜಿಗೌಡರ ಬದಲು ಅವರ ಬಣದ ಡಾ.ಮಹಾದೇವ ಅವರನ್ನು ಕಣಕ್ಕಿಳಿಸಲಾಗಿತ್ತು. 
 
ನಿನ್ನೆ ರಾತ್ರಿ ಅಪ್ಪಾಜಿಗೌಡರ ವಿರುದ್ಧ ಗುಡುಗುತ್ತಿದ್ದ ಡಾ.ಮಹದೇವ ಅವರು ಕೊನೆಯ ಕ್ಷಣದಲ್ಲಿ ಅಪ್ಪಾಜಿಗೌಡರ ಪರ ಕಣಕ್ಕಿಳಿದು ಅಚ್ಚರಿ ಮೂಡಿಸಿದರು. ಅಧಿಕಾರದ ಆಸೆಗೆ ಮಹದೇವ ಅವರು ಅಪ್ಪಾಜಿಗೌಡರ ಬಣಕ್ಕೆ ಸೇರಿದ್ದರು. ಆದರೇ ದುರದೃಷ್ಟದಿಂದ ಸೋಲು ಅನುಭವಿಸಿದ್ದಾರೆ. 
 
ಅಪ್ಪಾಜಿಗೌಡ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣೆ ನಡೆದ 5 ತಿಂಗಳಲ್ಲಿ ಇಂದು ಮತ್ತೊಮ್ಮೆ ಚುನಾವಣೆ ನಡೆಯಿತು. ಭ್ರಷ್ಟಾಚಾರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅಪ್ಪಾಜಿಗೌಡ ಹಾಗೂ ಅವರ ಜೊತೆ ಆಯ್ಕೆಯಾಗಿದ್ದ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವೇಕಾನಂದರ ವಿಚಾರಧಾರೆಗಳನ್ನು ತಿರುಚಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ