Select Your Language

Notifications

webdunia
webdunia
webdunia
webdunia

ಚಲ್ಲಘಟ್ಟ ಮೆಟ್ರೋ ಕಾಮಗಾರಿ ಶೇ.40ರಷ್ಟು ಪೂರ್ಣ!

ಚಲ್ಲಘಟ್ಟ ಮೆಟ್ರೋ ಕಾಮಗಾರಿ ಶೇ.40ರಷ್ಟು ಪೂರ್ಣ!
bengaluru , ಬುಧವಾರ, 15 ಜೂನ್ 2022 (15:15 IST)
ಬೆಂಗಳೂರಿನ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೇ.40 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.
ಹಂತ-I ಮತ್ತು ಹಂತ-II ರ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇದು ಚಲ್ಲಘಟ್ಟಪುರ ಚಿಕ್ಕದಾಗಿದ್ದು, ಬೈಯಪ್ಪಹಳ್ಳಿ-ಕೆಂಗೇರಿ ಮಾರ್ಗಕ್ಕೆ ತಡವಾಗಿ ಸೇರ್ಪಡೆಯಾಗಿದೆ. ಆಗಸ್ಟ್ ವೇಳೆಗೆ ನಿಲ್ದಾಣ ಸಿದ್ದವಾಗಿ ವರ್ಷಾಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ.
ಸುಮಾರು 33 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಎಲಿವೇಟೆಡ್ ನಿಲ್ದಾಣವು ನೇರಳೆ ಮಾರ್ಗದ ಪ್ರಸ್ತುತ ಟರ್ಮಿನಲ್ ಕೆಂಗೇರಿ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಸಹಾಯಕ ಎಂಜಿನಿಯರ್ ಎಂ ರಾಜೇಶ್, ಒಟ್ಟು ಹತ್ತು ಕಂಬಗಳನ್ನು ಹೊಂದಿರುವ ಚಲ್ಲಘಟ್ಟ ನಿಲ್ದಾಣವು ನೆಲಮಹಡಿಯಿಂದ ಮೊದಲ ಮಹಡಿಯನ್ನು ಹೊಂದಿದೆ. ರೈಲುಗಳು ಕಾರ್ಯನಿರ್ವಹಿಸಲು ಎರಡು ಪ್ಲಾಟ್‌ಫಾರ್ಮ್‌ ಗಳಿರುತ್ತವೆ. ಇತರ ಮೆಟ್ರೋ ನಿಲ್ದಾಣಗಳಂತೆ ಇದು ಕಾನ್ಕೋರ್ಸ್ ಅನ್ನು ಹೊಂದಿಲ್ಲ. ಪ್ಲಾಟ್‌ಫಾರ್ಮ್‌ನ ಉದ್ದವು 135 ಮೀಟರ್‌ಗಳು, ಎಲ್ಲಾ ನಿಲ್ದಾಣಗಳಲ್ಲಿ ಒಂದೇ ಆಗಿರುತ್ತದೆ.
ಒಬ್ಬರು ಕೋಚ್‌ನಿಂದ ಮೆಟ್ಟಿಲುಗಳತ್ತ ಹೆಜ್ಜೆ ಹಾಕುವ ದೂರವು ಕೇವಲ 65 ಮೀಟರ್‌ಗಳು, ಅದರ ಅರ್ಧದಷ್ಟು ಮಾತ್ರ ಇತರ ನಿಲ್ದಾಣಗಳಲ್ಲಿ ಕಂಡುಬರುತ್ತದೆ. ನಿಲ್ದಾಣವು ಕೇವಲ ಎರಡು ಮೆಟ್ಟಿಲುಗಳು, ಎರಡು ಲಿಫ್ಟ್‌ಗಳು ಮತ್ತು ಸಮಾನ ಸಂಖ್ಯೆಯ ಎಸ್ಕಲೇಟರ್‌ಗಳನ್ನು ಹೊಂದಿದೆ ಎಂದು ವಿವರಣೆ ನೀಡಿದರು.
ಚಲ್ಲಘಟ್ಟಪುರ ಮೆಟ್ರೊ ನಿಲ್ದಾಣದ ಸುಮಾ ಲಿಮಿಟೆಡ್ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರೆ, ಎಂಆರ್ ಕನ್ಸ್ಟ್ರಕ್ಷನ್ಸ್ ಫಿನಿಶಿಂಗ್ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿದೆ. ಪ್ರತಿದಿನ ಸರಾಸರಿ 500 ರಿಂದ 600 ಪ್ರಯಾಣಿಕರು ಮಾತ್ರ ಇದನ್ನು ಬಳಸುವ ನಿರೀಕ್ಷೆಯಿದೆ. ಆರ್ ಆರ್ ಮೆಡಿಕಲ್ ಕಾಲೇಜು, ದಂತ ಕಾಲೇಜು, ಸಮೀಪದ ಆಯುರ್ವೇದ ಆಸ್ಪತ್ರೆ ವಿದ್ಯಾರ್ಥಿಗಳು, ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವಾಸಿಗಳು ಮತ್ತು ದೊಡ್ಡಬೆಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.
ವಸ್ತುಗಳ ಕಳ್ಳತನ ಸಾಮಾನ್ಯಚಲ್ಲಘಟ್ಟ ನಿಲ್ದಾಣವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಲ್ದಾಣದಾದ್ಯಂತ ವಿವಿಧ ಕೆಲಸಗಳಿಗೆ ಬಳಸುವ ಸ್ಟೀಲ್ ಮತ್ತು ಕಬ್ಬಿಣದ ರಾಡ್‌ಗಳ ಆಗಾಗ್ಗೆ ಕಳ್ಳತನವಾಗಿದೆ. “ಅಗತ್ಯಕ್ಕೆ ಅನುಗುಣವಾಗಿ ಸ್ಕ್ಯಾಫೋಲ್ಡಿಂಗ್ ರಚನೆಯನ್ನು ಸಿದ್ಧಪಡಿಸಲು ನಮಗೆ ಸಣ್ಣ ಉಕ್ಕಿನ ರಾಡ್‌ಗಳು ಬೇಕಾಗುತ್ತವೆ. ಇದನ್ನು ರೆಡಿ ಮಾಡಲು ತಂದಿರುವ ರಾಡ್ ಗಳನ್ನು ಕದ್ದುಕೊಂಡು ಹೋಗುತ್ತಾರೆ. ನಷ್ಟವನ್ನು ಸರಿದೂಗಿಸಲು ಗುತ್ತಿಗೆದಾರರು ಹೆಚ್ಚಿನದನ್ನು ಕೇಳುತ್ತಾರೆ ಎಂದು ಸಮಸ್ಯೆಯನ್ನು ತೋಡಿಕೊಂಡರು ಬಿಎಂಆರ್ ಸಿಎಲ್ ನ ಉಪ ಮುಖ್ಯ ಎಂಜಿನಿಯರ್ ಪ್ರಕಾಶ್ ಹೆಗ್ಡೆ.


Share this Story:

Follow Webdunia kannada

ಮುಂದಿನ ಸುದ್ದಿ

ರೂಪಾ ಮೌದ್ಗಿಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ