ಬಿಎಸ್‌ವೈ ವಿರುದ್ಧ ಮಾಜಿ ಸಚಿವ ಬೆಳಮಗಿ ವಾಗ್ದಾಳಿ

Webdunia
ಸೋಮವಾರ, 30 ಏಪ್ರಿಲ್ 2018 (13:31 IST)
ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ತೊಡೆತಟ್ಟಿದ್ದಾರೆ.
 ನನ್ನ ಠೇವಣಿ ಕಳೆಯಲು ಯಡಿಯೂರಪ್ಪನವರಿಂದ ಸಾಧ್ಯವಿಲ್ಲ. ಯಾಕೆಂದ್ರೆ ನನ್ನೊಂದಿಗೆ ಮತದಾರರಿದ್ದಾರೆ ಎಂದು ಬಿಎಸ್ ವೈ ಸವಾಲು ಹಾಕಿದ್ರು. 
 
ಕಲಬುರಗಿಯಲ್ಲಿ ಮಾತನಾಡಿದ ಬೆಳಮಗಿ, ಈ ಹಿಂದೆ ಬಿಎಸ್ ವೈ ಅವರು ಕೆಜಿಪಿ ಪಕ್ಷ ಸ್ಥಾಪಿಸಿದ್ದ ವೇಳೆ ನಾನು ಅವರೊಂದಿಗೆ ಹೋಗಿಲ್ಲ ಎನ್ನುವ ಕಾರಣಕ್ಕೆ ನನ್ನ ವಿರುದ್ದ ಷಡ್ಯಂತ್ರ ರೂಪಿಸಿ ಟಿಕೆಟ್ ತಪ್ಪಿಸಿದ್ದಾರೆ. ಈಗ ಬೆಳಮಗಿ ಠೇವಣಿ ಕಳೆದ್ರೆ ನನಗೆ ಸಮಧಾನ ಎಂದು ಹೇಳುತ್ತಿದ್ದಾರೆ. ನನ್ನ ಠೇವಣಿ ಕಳೆಯಲು ಇವರ್ಯಾರು....?, ನನ್ನ ಠೇವಣಿ ಯಾಕೆ...? ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲು ಮತದಾರರ ಪ್ರಭು ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ರು. 
 
ಯಡಿಯೂರಪ್ಪನವರ ವಿರುದ್ದ ಅಸಮಾಧಾನಗೊಂಡಿರುವ ಹಲವು ಜನ ನಾಯಕರು ಬಿಎಸ್ ವೈ ಅವರನ್ನು ಬೈದಿದ್ದಾರೆ. ಆದ್ರೆ ನಾನು ತುಟಿಪಿಟಕೆಂದಿಲ್ಲ. ಆದ್ರೂ ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದ ಬೆಳಮಗಿ. ನನ್ನ ಠೇವಣಿ ಜಪ್ತಿ ಆಗೋದಿಲ್ಲ, ಬದಲಾಗಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಬೆಳಮಗಿ ಯಡಿಯೂರಪ್ಪಗೆ ಸವಾಲು ಹಾಕಿದ್ರು. ಇನ್ನು ಗುಂಡಾಗರ್ದಿ ಮಾಡಿದ್ದು ನಾನಲ್ಲ. ಈಗ ಟಿಕೆಟ್ ಕೊಟ್ಟಿದ್ದಿರಲ್ಲ, ಅವರು ಗುಂಡಾಗರ್ದಿ ಮಾಡಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಆದಲ್ಲಿ ಸಿದ್ದರಾಮಯ್ಯ ಸ್ಥಾನಕ್ಕೆ ಜಿ ಪರಮೇಶ್ವರ್ ಸೂಕ್ತ: ಕೆಎನ್ ರಾಜಣ್ಣ

ಇಂಧನ ದರ ಏರಿಕೆ ಬಿಸಿ ಬೆನ್ನಲ್ಲೇ ಗ್ರಾಹಕರಿಗೆ ಅಕ್ಕಿ ಬೆಲೆಯಲ್ಲಿ ಬಿಗ್ ಶಾಕ್

ಪ್ರಧಾನಿ ನರೇಂದ್ರ ಮೋದಿಗೆ ನಾರ್ವೇಯ ಅತ್ಯುನ್ನತ ನಾಗರಿಕ ಗೌರವ

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವುದು ಕೈ ನಾಯಕರ ಗುರಿ: ರೇವಂತ್ ರೆಡ್ಡಿ

ಜೆಡಿಎಸ್‌ ಬಿಜೆಪಿ ಸಂಬಂಧ ತುಂಬಾ ಚೆನ್ನಾಗಿದೆ: ಎಚ್ ಡಿ ದೇವೇಗೌಡ

ಮುಂದಿನ ಸುದ್ದಿ
Show comments