Webdunia - Bharat's app for daily news and videos

Install App

ವಿಮ್ಸ್‌ಗೆ ಸಚಿವ ಸಂತೋಷ್ ಲಾಡ್ ಭೇಟಿ: ಅವ್ಯವಸ್ಥೆ ನೋಡಿ ಅಧಿಕಾರಿಗಳಿಗೆ ತರಾಟೆ

Webdunia
ಶನಿವಾರ, 2 ಜುಲೈ 2016 (10:47 IST)
ಬಳ್ಳಾರಿ ನಗರದ ವಿಜಯನಗರ ವಿಮ್ಸ್ ಆಸ್ಪತ್ರೆಗೆ ದಿಢೀರ ಭೇಟಿ ನೀಡಿರುವ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಆಸ್ಪತ್ರೆಯ ಅವ್ಯವಸ್ಥೆ ಕಂಡು ವಿಮ್ಸ್ ನಿರ್ದೇಶಕ ವಿ.ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.
 
ಏನ್ರಿ ಇದು ಆಸ್ಪತ್ರೆನಾ ಯಾವೊಬ್ಬ ರೋಗಿಗಳಿಗೂ ಔಷಧಿ ಕೊಟ್ಟಿಲ್ವಂತೆ. ರೋಗಿಗಳು ಎಲ್ಲಾ ತರಹದ ಔಷಧಿಗಳನ್ನು ಹೊರಗಿನಿಂದ ತರುತ್ತಾರಂತೆ. ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ನಿಮಗೇನಾದರು ಮಾನವೀಯತೆ ಇದಿಯಾ? ಎಂದು ಸಚಿವರು ಆಸ್ಪತ್ರೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
 
ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ನಿರ್ದೇಶಕರ ಉತ್ತರಕ್ಕೆ ಕೋಪಕೊಂಡ ಸಚಿವ ಸಂತೋಷ್ ಲಾಡ್, ನೀವು ಏನು ಸುಧಾರಣೆ ಕೈಗೊಂಡಿದ್ದೀರಿ ಎನ್ನುವುದ ಕಣ್ಣ ಮುಂದೆ ಕಾಣುತ್ತಿದೆ. ರೋಗಿಗಳಿಗೆ ಮಲಗಲು ಸರಿಯಾದ ಹಾಸಿಗೆ ವ್ಯವಸ್ಥೆ ಇಲ್ಲ. ಅವರಿಗೆ ಬೆಡ್‌ಶೀಟ್ ಇಲ್ಲದೆ ಹಾಗೆ ಮಲಗಿಸಿದ್ದೀರಿ. ಇದ್ದಕ್ಕೆ ನಾನೇ ಪರಿಹಾರ ನೀಡಬೇಕಾ ಅಥವಾ ನೀವೆ ವ್ಯವಸ್ಥೆಗಳನ್ನು ಸರಿಪಡಿಸುತ್ತಿರಾ ಎಂದು ಖಡಕ್ ಆಗಿ ತರಾಟೆಗೆ ತೆಗೆದುಕೊಂಡರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರಕ್ಕೆ ಮುಜುಗರ ತಂದಿಟ್ಟ ಬೆನ್ನಲ್ಲೇ ಬಿಆರ್ ಪಾಟೀಲ್ ಗೆ ಸಿಎಂ ಬುಲಾವ್

ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಗಮನಿಸಿ, ಇನ್ಮೇಲೆ ಹೊಸ ರೂಲ್ಸ್

ಇರಾನ್ ಪ್ರತೀಕಾರದ ಕಿಚ್ಚು: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪಕ್ಕಾ

ಇರಾನ್ ನ ಸರ್ವನಾಶಕ್ಕೆ ಕಾರಣವಾಗಿದ್ದು ಒಬ್ಬ ಮಹಿಳೆ, ಯಾರೀಕೆ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ನಗಲೂ ಆಗದ ಅಳಲೂ ಆಗದ ಸ್ಥಿತಿ

ಮುಂದಿನ ಸುದ್ದಿ
Show comments