Webdunia - Bharat's app for daily news and videos

Install App

ಊಬರ್ ಬುಕ್ ಮಾಡಿ ಆನ್‌ಲೈನ್​ ನಲ್ಲಿ ಹಣ ನೀಡುವ ಪ್ರಯಾಣಿಕರೇ ಎಚ್ಚರ

Webdunia
ಶುಕ್ರವಾರ, 1 ಮಾರ್ಚ್ 2019 (07:00 IST)
ಬೆಂಗಳೂರು : ಊಬರ್ ಬುಕ್ ಮಾಡಿ ಪ್ರಯಾಣ ಬೆಳೆಸಿದ ವ್ಯಕ್ತಿಯೊಬ್ಬರಿಗೆ ಊಬರ್ ಚಾಲಕ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.


ಪ್ರದೀಪ್ ಚಂದ್ರಶೇಖರನ್ ಮೋಸ ಹೋಗಿರುವ ವ್ಯಕ್ತಿ. ಇವರು ಬೇರೆ ಕಡೆ ಹೋಗಲು ಊಬರ್ ಬುಕ್ ಮಾಡಿ ಪ್ರಯಾಣ ಬೆಳೆಸಿದ್ದರು. ಬಳಿಕ ಡ್ರಾಪ್ ಮಾಡಿದ್ದ ಡ್ರೈವರ್ ಆನ್‌ಲೈನ್​ ನಲ್ಲೇ ಹಣ ಹಾಕಲು ಹೇಳಿದ್ದಕ್ಕೆ ಪ್ರದೀಪ್ ಭೀಮ್ ಆ್ಯಪ್​ನಲ್ಲಿ 698 ರೂ. ಹಣ ಹಾಕಿದ್ದರಂತೆ. ಆಗ ಪ್ರದೀಪ್​ ಮೊಬೈಲ್​ನಲ್ಲಿ ಹಣ ಕಟ್ ಆಗಿರುವುದರ ಬಗ್ಗೆಯೂ ಮಾಹಿತಿ ಬಂದಿತ್ತು. ಆದರೆ ಡ್ರೈವರ್ ಮಾತ್ರ ಹಣ ಬಂದಿಲ್ಲ ಮತ್ತೊಮ್ಮೆ ಟ್ರೈ ಮಾಡಿ ಎಂದಿದ್ದಾನಂತೆ. ಈ ಹಿನ್ನೆಲೆ ಮತ್ತೆ ಟ್ರಾನ್ಸಾಕ್ಷನ್ ಮಾಡಿ‌ದ್ದಾರೆ. ಆಗಲೂ ಹಣ ಕಟ್ ಆಗಿರುವುದರ‌ ಬಗ್ಗೆ ಮಾಹಿತಿ ಬಂದರೂ ಕೂಡ ಡ್ರೈವರ್ ಮಾತ್ರ ಹಣ ಬಂದಿಲ್ಲವೆಂದು ಸುಳ್ಳು ಹೇಳಿದ್ದಾನೆ.


ತಕ್ಷಣ ಪ್ರದೀಪ್ ಬ್ಯಾಂಕ್ ​ಗೆ ಕರೆ ಮಾಡಿ ವಿಚಾರಿಸಿದಾಗ ಡ್ರೈವರ್ ನಂಬರ್​ ಗೆ ಹಣ ಕ್ರೆಡಿಟ್ ಆಗಿರುವುದು ತಿಳಿದುಬಂದಿದೆ. ಡ್ರೈವರ್ ಮಾಡಿದ ಮೋಸದ ಬಗ್ಗೆ ಅರಿತ ಪ್ರದೀಪ್ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ‌.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಣ್ಣ ಹೇಳಿಕೆ ಮಾತ್ರವಲ್ಲ ಡಿಕೆಶಿ ಆರ್‌ಎಸ್‌ಎಸ್‌ ಗೀತೆಯೂ ಹೈಕಮಾಂಡ್‌ ತಲುಪಲಿ ಎಂದ ಜಾರಕಿಹೊಳಿ

ತಾರಕಕ್ಕೇರಿದ ಸುಂಕ ಸಮರ: ದೊಡ್ಡಣ್ಣ ನಾಲ್ಕು ಬಾರಿ ಕರೆಮಾಡಿದರೂ ಕ್ಯಾರೇ ಎನ್ನದ ನರೇಂದ್ರ ಮೋದಿ

ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

ಜಮ್ಮುವಿನಲ್ಲಿ ರಣಭೀಕರ ಮಳೆ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, 30 ಮಂದಿ ಸಾವು

Karnataka Weather:ಗಣೇಶ ಹಬ್ಬದಂದು ಬೆಂಗಳೂರಿನ ಹವಾಮಾನ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments