Select Your Language

Notifications

webdunia
webdunia
webdunia
webdunia

ರಜೆ ಮರೆತು ಕೆಲಸ ಮಾಡಿದ ಬಿಬಿಎಂಪಿ ಸಿಬ್ಬಂದಿ

ರಜೆ ಮರೆತು ಕೆಲಸ ಮಾಡಿದ ಬಿಬಿಎಂಪಿ ಸಿಬ್ಬಂದಿ
Bangalore , ಮಂಗಳವಾರ, 23 ಮೇ 2017 (11:41 IST)
ಬೆಂಗಳೂರು: ಮೊನ್ನೆ ಬಂದ ಭಾರೀ ಮಳೆಗೆ ರಾಜಾಕಾಲುವೆ ಬಿದ್ದು  ಸಾವನ್ನಪ್ಪಿದ ಶಾಂತಕುಮಾರ್ ಮೃತದೇಹದ ಹುಡುಕಾಟಕ್ಕಾಗಿ ಬಿಬಿಎಂಪಿ ಸಿಬ್ಬಂದಿ ರಜೆ ಮರೆತು ಕೆಲಸ ಮಾಡಿದ್ದಾರೆ.

 
ಸತತ ಎರಡು ದಿನದಿಂದ ಶಂಕಿತ ಪ್ರದೇಶಗಳಲ್ಲೆಲ್ಲಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜಾಕಾಲುವೆಗೆ ತಡೆಗೋಡೆ ನಿರ್ಮಿಸುತ್ತಿದ್ದ ಶಾಂತಕುಮಾರ್ ಶನಿವಾರ ರಾತ್ರಿ ಸುರಿದ ಮಳೆಗೆ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದರು.

ಜನರು ಕಾಲುವೆಗೆ ಕಸ ಸುರಿಯುವುದನ್ನು ನಿಲ್ಲಿಸಿದರೆ ಇಂತಹ ಅನಾಹುತಗಳನ್ನು ತಡೆಯಬಹುದು ಎಂದು ಈ ಸಂದರ್ಭದಲ್ಲಿ ಮೇಯರ್ ಜಿ. ಪದ್ಮಾವತಿ ತಿಳಿಸಿದ್ದಾರೆ. ಸುರಕ್ಷತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೂ ಯಾವುದೇ ಅಪಾಯವಾಗದಂತೆ ನೀರಿನಲ್ಲಿ ಮೃತದೇಹ ಹುಡುಕಾಟ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮೇ.26ರಿಂದ 900 ನಗರಗಳಲ್ಲಿ ಮೋದಿ ಫೆಸ್ಟ್