Webdunia - Bharat's app for daily news and videos

Install App

ಬಿಬಿಎಂಪಿ ವಾರ್ಡ್ ವಿಂಗಡನೆ

Webdunia
ಶುಕ್ರವಾರ, 24 ಜೂನ್ 2022 (20:01 IST)
ಬಿಬಿಎಂಪಿ ವಾರ್ಡ್ ವಿಂಗಡನೆಯನ್ನು ಬಿಜೆಪಿಯವರ ಕಚೇರಿ, ಕೇಶವ ಕೃಪಾ, ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ಬಿಜೆಪಿ ನೀಡಿದ ಡಿಲಿಮಿಟೇಷನನ್ಗೆ ಕಮಿಷನರ್ ಸಹಿ ಹಾಕಿದ್ದಾರೆ ಅಷ್ಟೇ. ಪಾಲಿಕೆಯ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರ್ವೆ ಮಾಡಿಲ್ಲ. ಯಾವ ಅಧಿಕಾರಿಗಳಿಗೂ ಡಿಲಿಮಿಟೇಷನ್ ಬಗ್ಗೆ ಮಾಹಿತಿ ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳಿಗೂ ವಾರ್ಡ್ ಮರು ವಿಂಗಡಣೆ ಬಗ್ಗೆ ಗೊತ್ತಿಲ್ಲ ಎಂದರು. ಬಿಬಿಎಂಪಿ ಚುನಾವಣೆಯನ್ನು ಎಷ್ಟು ವರ್ಷ ಮುಂದೂಡಲು ಸಾಧ್ಯ?. ಲೋಪದೋಷಗಳಿದ್ದರೆ ಆಕ್ಷೇಪಣೆ ಹಾಕಿ, ನಂತರ ಕೋರ್ಟ್ಗೆ ಹೋಗಬೇಕಾ ಎಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇನ್ನೂ  ವಾರ್ಡ್ ಪುನರ್ ವಿಂಗಡನೆ‌ ವಿಚಾರವಾಗಿ ಮುಖ್ಯ ಆಯುಕ್ತರ ಸಮಿತಿ ಯಾವುದೇ ಸಭೆಗಳನ್ನು ನಡೆಸಿಲ್ಲ. ಯಾರ ಅಭಿಪ್ರಾಯವನ್ನೂ ಸಂಗ್ರಹಿಸದೇ ವಾರ್ಡ್ ಪುನರ್ ವಿಂಗಡನೆ‌ ಮಾಡಿದ್ದಾರೆ. ಯಾರಿಗೂ ಮಾಹಿತಿ ನೀಡದೆ ಅವರೇ ಮಾಡಿಕೊಂಡಿದ್ದಾರೆ. ನಮಗೆ ಹಾರ್ಡ್ ಕಾಪಿ‌ ಸಿಕ್ಕಮೇಲೆ ಅದ್ರಲ್ಲಿ ಏನು ಲೋಪದೋಷಗಳಿವೆ ಎಂದು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video,ಪಾಕ್‌ನ ಗ್ಯಾಂಗ್‌ಸ್ಟರ್‌ ಉಜೈರ್‌ ಬಲೋಚ್‌ ಸಹೋದರನಿಗೆ ಗುಂಡೇಟು, ಸ್ಥಿತಿ ಗಂಭೀರ

ಗಾಯಗೊಂಡ ದೆಹಲಿ ಪೊಲೀಸರ ಕುಟುಂಬಸ್ಥರು ಅಳುತ್ತಿದ್ದಾರೆ ಎಂದಿದ್ದಕ್ಕೆ ನೀವು ಬಿಜೆಪಿಯವರಾ ಎಂದ ರಾಹುಲ್ ಗಾಂಧಿ Video

ರಾಜ್ಯದ ಹಿತಕ್ಕಾಗಿ ನಾವಿದ್ದೇವೆ, ದಯವಿಟ್ಟು ಬಂದ್ ಕೈಬಿಡಿ: ಡಿಕೆ ಶಿವಕುಮಾರ್‌

ಮಂಡ್ಯದಲ್ಲಿ ಬಿಜೆಪಿ ನಾಯಕರ ಕಾವೇರಿ ಹೋರಾಟದ ಕಿಚ್ಚು: ಯಾರು ಏನೆಲ್ಲಾ ಹೇಳಿದ್ರು ನೋಡಿ

ದೃಶ್ಯಂ ಸಿನಿಮಾವನ್ನು ಮೀರಿಸುವ ಗುಜರಾತ್‌ನಲ್ಲಿ ನಡೆದ ಈ ಪ್ರಕರಣ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments