ಬೆಂಗಳೂರಿಗರಿಗೆ ಇನ್ಮುಂದೆ ಗಾರ್ಬೇಜ್ ಟ್ಯಾಕ್ಸ್

Webdunia
ಬುಧವಾರ, 2 ಫೆಬ್ರವರಿ 2022 (19:41 IST)
ಬೆಂಗಳೂರು ಮಂದಿಗೆ ಕರೆಂಟ್ ಬಿಲ್‌ ಜತೆ ಗಾರ್ಬೆಜ್ ಯೂಸರ್ ಫೀ ಹೊಡೆತ ಬೀಳೋದು ಪಕ್ಕ ಆಗ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿರುವ ಬಿಬಿಎಂಪಿ, ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಇದೀಗ ಕಸ ನಿರ್ವಹಣೆಗೆ ಆದಾಯ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿರೋ ಬಿಬಿಎಂಪಿ ಇದೀಗ ಕಸ ಸಂಗ್ರಹಣೆಗೆ ಬಿಲ್​ ನೀಡಲು ಮುಂದಾಗಿದೆ. ಬೆಂಗಳೂರಿಗರಿಗೆ ಕರೆಂಟ್​ ಬಿಲ್​ ಜೊತೆ ಕಸದ ಬಿಲ್​ ಕೊಡುವ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರು ಜನ ಸದ್ಯಕ್ಕೆ ವರ್ಷಕ್ಕೊಮ್ಮೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ವೇಳೆಯೇ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಆದ್ರೂ ಬಿಬಿಎಂಪಿಗೆ ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.
ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು ಕಸ ಶುಲ್ಕ ವಿಚಾರವಾಗಿ ಹಳೇ ನಿಯಮಗಳೇ ಇರುತ್ತೆ. ಯಾವುದೇ ರೀತಿಯ ಬದಲಾವಣೆ ಸದ್ಯಕ್ಕೆ ಮಾಡಿಲ್ಲ. ಗಾರ್ಬೆಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಕಸದೂರು ಬಿಂಗೀಪುರಕ್ಕೆ ಕೈಕೊಟ್ಟ ಬಿಬಿಎಂಪಿ; ಭರವಸೆಯಾಗಿಯೇ ಉಳಿದ ಕಸಪೀಡಿತ ಹಳ್ಳಿಗಳು
 
ಕಸದ ಶುಲ್ಕಕ್ಕೆ ಸಂಭಂದಪಟ್ಟಂತೆ ಈಗಿರುವ ನಿಯಮವಳಿಗಳೆ ಮುಂದುವರೆಯಲಿವೆ. ಅದ್ರಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಸಿ ಅಭಿವೃದ್ಧಿ ಮಾಡಲು ಹೊರಟಿದ್ದೇವೆ ಎಂದ್ರು. ಇನ್ನು ತಿಂಗಳ ಖರ್ಚಿನ ಜೊತೆಗೆ ಇದೀಗ ಕಸದ ಬಿಲ್​ ಕಟ್ಬೇಕು ಅಂದ್ರೆ ನಿಜಕ್ಕೂ ಕಷ್ಟವಾಗುತ್ತೆ ಅಂತಾರೆ ಜನ ಸಾಮಾನ್ಯರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡಕ್ಕೂ ಸೈ: ರಾಹುಲ್ ಗಾಂಧಿ ವ್ಯಂಗ್ಯ

ಮುಂದಿನ ಸುದ್ದಿ
Show comments