Publish Date: Thu, 02 Sep 2021 (18:54 IST)
Updated Date: Thu, 02 Sep 2021 (18:56 IST)
ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿರುವ ಗುಂಡಿಗಳನ್ನು ಮುಚ್ಚಲು 7 ದಿನ
ಕಾಲಾವಕಾಶ ಸಾಕು.ಆಯಾವಲಯಗಳಲ್ಲಿ ವಿಶೇಷವಾದ ತಂಡವಿದೆ.ಆ ಟೀಮ್ ಗುಂಡಿ ಗಳನ್ನು ಮುಚ್ಚುವ ಕೆಲಸ ಮಾಡುತ್ತಾರೆ ಎಂದು ಮುಖ್ಯ ಆಯುಕ್ತ ಗೌರವಗುಪ್ತ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಟು ವಲಯಗಳಲ್ಲಿ ಜಂಟಿ ಆಯುಕ್ತರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಗುಂಡಿಮುಚ್ಚುವ ಕಾಮಗಾರಿ ಮಾಡಿಸುತ್ತಾರೆ ಎಂದರು.
ಒಂದು ಸಾವಿರ ಕೋಟಿ ಅನುದಾನದ ಅಡಿಯಲ್ಲಿ.ರಸ್ತೆಗಳ ರಿಪೇರಿ. ರಾಜಕಾಲುವೆಗಳಲ್ಲಿ ಹೊಳೆತ್ತುವುದು. ಕಸ ಕಡ್ಡಿ ಸೇರದಂತೆ ಜಾಗೃತಿ ವಹಿಸುವುದು. ಸಾರ್ವಜನಿಕರು ರಾಜಕಾಲುವೆಗೆ ಕಸಹಾಕದಂತೆ ಎಚ್ಚರಿಕೆ ನೀಡುತ್ತೇವೆ. ಕೊಳಚೆ ನೀರನ್ನು ತಡೆಗಟ್ಟುವ .ಕೆಲಸ ಮುಗಿದ ಮೇಲೆ ರಾಜಕಾಲುವೆಯ ಕಾಮಗಾರಿ ಆರಂಭಿಸಲಾಗುವುದು ಎಂದರು.