Webdunia - Bharat's app for daily news and videos

Install App

ಹಣಕಾಸು ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸಿದ ಸಿದ್ದರಾಮಯ್ಯರ ಸರಕಾರ: ಬಸವರಾಜ ಬೊಮ್ಮಾಯಿ

Krishnaveni K
ಸೋಮವಾರ, 22 ಏಪ್ರಿಲ್ 2024 (11:02 IST)
ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ಹಣಕಾಸು ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ; ಇದೊಂದು ಗಂಭೀರ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು. 
 
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅನುತ್ಪಾದಕ ವೆಚ್ಚದ ಮೇಲೆ ಈ ಸರಕಾರಕ್ಕೆ ನಿಯಂತ್ರಣವೇ ಇಲ್ಲ ಎಂದರು. ನೀವು ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಅದಕ್ಕಾಗಿ ಹಣಕಾಸಿನ ತಯಾರಿ ಮಾಡಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರಕಾರದಿಂದ ಸರಿಯಾಗಿ ಹಣ ಬರುತ್ತಿಲ್ಲ ಎನ್ನುವ ನೀವು ಜನರ ತೆರಿಗೆ ದುಡ್ಡನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರದಿಂದ ಬಂದ ಹಣದ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಯುಪಿಎ- ಎನ್‍ಡಿಎ ಅವಧಿಯ ಅನುದಾನ ಹೋಲಿಸಿದರೆ ಸತ್ಯ ಹೊರಕ್ಕೆ ಬರುತ್ತದೆ ಎಂದು ತಿಳಿಸಿದರು. ಯುಪಿಎ 10 ವರ್ಷಗಳ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ, ಕಾಂಗ್ರೆಸ್ಸಿನ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರಿದ್ದ ಸರಕಾರದಲ್ಲಿ ತೆರಿಗೆ ಹಂಚಿಕೆಯಲ್ಲಿ 81,795 ಕೋಟಿ ರಾಜ್ಯಕ್ಕೆ ಲಭಿಸಿದ್ದರೆ, ನಮ್ಮ ಎನ್ಡಿಎ ಸರಕಾರದಲ್ಲಿ 2,82,791 ಕೋಟಿ ನೀಡಿದ್ದೇವೆ. ಬಹುತೇಕ 2 ಲಕ್ಷ ಕೋಟಿ ಹೆಚ್ಚು ಹಣ ನೀಡಿದ್ದೇವೆ ಎಂದು ವಿವರಿಸಿದರು.

2014-24ರಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎನ್ನುತ್ತೀರಲ್ಲವೇ? ನಾನು ನಿಮಗೆ ಪ್ರಶ್ನೆ ಕೇಳುತ್ತೇನೆ. ನಿಮ್ಮ ತೆರಿಗೆ ಪಾಲು 81,795 ಕೋಟಿ ಇತ್ತು. ನಮ್ಮ ಕೊಡುಗೆ 2,82,791 ಕೋಟಿ ಇದೆ. ನಮ್ಮದು ರೂಪಾಯಿಗೆ 13 ಪೈಸೆ ಎಂದಾದರೆ ನಿಮ್ಮದು 3 ಪಾಲು ಕಡಿಮೆ ಇದ್ದರೆ 4 ಪೈಸೆ ಆಗುತ್ತದೆಯಲ್ಲವೇ ಎಂದು ಬಸವರಾಜ ಬೊಮ್ಮಾಯಿಯವರು ಪ್ರಶ್ನೆಯನ್ನು ಮುಂದಿಟ್ಟರು.
4 ಪೈಸೆ ಹಿಂದೆ ಸಿಗುತ್ತಿತ್ತು. ಈಗ 13 ಪೈಸೆ ಸಿಗುತ್ತಿದೆ. ಆದರೂ ಬೊಬ್ಬೆ ಹೊಡೀತೀರಲ್ವ? ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಯುಪಿಎ 10 ವರ್ಷಗಳ ಅವಧಿಯಲ್ಲಿ ಅನುದಾನವು 60,779 ಕೋಟಿ ಇತ್ತು. ನಮ್ಮ ಅವಧಿಯಲ್ಲಿ 2,08,832 ಕೋಟಿ ಎಂದು ವಿವರ ನೀಡಿದರು. ಸುಮಾರು 3 ಪಟ್ಟು ಹೆಚ್ಚು ಗ್ರಾಂಟ್ ಇನ್ ಏಯ್ಡ್ ಬಂದಿದೆ ಎಂದರು. ಹೆಚ್ಚುವರಿ ಅನುದಾನ ಬಂದದ್ದನ್ನು ಸಿದ್ದರಾಮಯ್ಯರು ಹೇಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರವು ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡಿದೆ. ಆ ಪೈಕಿ ಕರ್ನಾಟಕಕ್ಕೆ 6012 ಕೋಟಿ ಲಭಿಸಿದೆ. ಇದನ್ನು 50 ವರ್ಷಗಳ ಬಳಿಕ ಮರುಪಾವತಿ ಮಾಡಿದರೆ ಸಾಕು. ಇದನ್ನು ಬಂಡವಾಳವಾಗಿ ಹೂಡಿ ಆಸ್ತಿ ಮಾಡಿಕೊಳ್ಳಲು ಕೊಡಲಾಗಿದೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

ಮುಸ್ಲಿಮರು ಬಹುಪತ್ನಿಯರನ್ನು ಹೊಂದಬಹುದು: ಅಲಹಾಬಾದ್ ಕೋರ್ಟ್ ತೀರ್ಪು

India Pakistan:ಪಾಕಿಸ್ತಾನದ ಚೀನಾ ಏರ್ ಡಿಫೆನ್ಸ್ ವ್ಯವಸ್ಥೆಯನ್ನು ಜಾಮ್ ಮಾಡಿದ್ದ ಭಾರತ: ರೋಚಕ ಕಹಾನಿ

Nuclear leak: ಪಾಕಿಸ್ತಾನದ ನ್ಯೂಕ್ಲಿಯರ್ ಸೋರಿಕೆಯಾಗಿಲ್ಲ: ಎಲ್ಲಾ ಸುದ್ದಿ ಸುಳ್ಳು

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬೆಲೆ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments