Publish Date: Thu, 01 Sep 2022 (21:23 IST)
Updated Date: Thu, 01 Sep 2022 (21:26 IST)
ಕೆಂಪೇಗೌಡರ ಪ್ರತಿಮೆ ಅನಾವರಣ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ವಿಶ್ವಮಾನ್ಯ ಪಡೆದ ಏಕೈಕ ನಗರ ಅದು ಬೆಂಗಳೂರು. ಬೆಂಗಳೂರು ಸಂಸ್ಥಾಪಕರಾದ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವುದು ಬಹು ದಿನದ ಬೇಡಿಕೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಆಗ್ತಿದೆ. ಜಾತಿ, ಧರ್ಮಾತೀತವಾಗಿ ಬೆಳೆದಿರೋದು ಬೆಂಗಳೂರಿನ ಶಕ್ತಿ ವರ್ಣಿಸಲು ನೂರು ಪದಗಳು ಸಾಕಾಗುವುದಿಲ್ಲ. ಈ ಸಂದೇಶವನ್ನು ವಿಶ್ವಕ್ಕೆ ತಿಳಿಸಬೇಕು. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಲಾಗಿದೆ.
ಇನ್ನೂ ಪ್ರತಿ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಆಗಬೇಕು ಎಂಬುದು ನಮ್ಮ ಉದ್ದೇಶ. ನಾಡಿನ ಜನ ಸೇರಿ ಈ ಕಾರ್ಯಕ್ರಮ ಮಾಡಿದರು.