Webdunia - Bharat's app for daily news and videos

Install App

ಸಿ.ಎಂ.ಎಚ್. ರಸ್ತೆಯ ಎಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಬೆದರಿಕೆ

Webdunia
ಸೋಮವಾರ, 20 ಸೆಪ್ಟಂಬರ್ 2021 (20:50 IST)
9.90 ಲಕ್ಷ ರೂ.ಹಣ ಕಸಿದು ಪರಾರಿಯಾಗಿದ್ದವನಿಗೆ ಎರಡು ವರ್ಷ ಸಜೆ, 10 ಸಾವಿರ ಜುಲ್ಮಾನ ವಿಧಿಸಿ 10 ನೇ ಎಸಿಎಂಎಂ ನ್ಯಾಯಾಲಯದ ತೀರ್ಪು. ಬ್ರಂಜಾಲ್ ಭಟ್ಟಾಚಾರ್ಯಜಿ ಶಿಕ್ಷೆಗೊಳಗಾದ ವ್ಯಕ್ತಿ. 
ಏನಿದು ಪ್ರಕರಣ?
2012 ರಲ್ಲಿ ಅರ್ಜಿಯ ಮುಖಕ್ಕೆ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡು ಇಂದಿರಾನಗರದ ಸಿಎಂಎಚ್ ರಸ್ತೆಯ ಎಚ್ಡಿಎಫ್'ಸಿ ಬ್ಯಾಂಕ್ಗೆ ಭೇಟಿ ನೀಡಿತು. ಬ್ಯಾಂಕ್ ವ್ಯವಸ್ಥಾಪಕರ ಬಳಿ ಅವನು ಖಾತೆ ತೆರವುಗೊಳಿಸಲು ಚರ್ಚಿಸಲಾಗಿದೆ. ನಂತರ ದಾಖಲೆಗಳನ್ನು ಪರಿಶೀಲಿಸಿ, ಸರಿಯಾದ ದಾಖಲೆಗಳಿಲ್ಲ ಎಂದು ಆರೋಪಿಸಲು ತಿಳಿಸಲಾಗಿದೆ. 
ಈ ವೇಳೆ ಹಾಲ್‍ಗೆ ಬಂದ ಆರೋಪಿ ಬಳಿ ಆಕಸ್ಮಿಕವಾಗಿ ಬ್ಯಾಂಕ್ ವ್ಯವಸ್ಥಾಪಕರು ಬಂದಿದಿದ್ದಾರೆ. ಈ ವೇಳೆ ಹಣ ನೀಡುವಂತೆ ಆರೋಪಿ ಮ್ಯಾನೇಜರ್‍ಗೆ ಬೆದರಿಸಿದ್ದಾನೆ. ಹಣವಿಲ್ಲ, ಇಲ್ಲಿಂದ ಹೋಗು ಎಂದು ಗದರಿಸಿದ ಮ್ಯಾನೇಜರ್‍ಗೆ, ತನ್ನ ಸೊಂಟದಲ್ಲಿ ಕಟ್ಟಿಕೊಂಡಿದ್ದ ವಸ್ತುವನ್ನು ತೋರಿಸಿ ಇದರಲ್ಲಿ ಬಾಂಬ್ ಇದೆ. ಹಣ ನೀಡದಿದ್ದರೆ ಬ್ಲಾಸ್ಟ್ ಮಾಡುವುದಾಗಿ ಹೆದರಿಸಿದ್ದಾನೆ. ಬಳಿಕ ಬ್ಯಾಂಕ್‍ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ಬ್ಯಾಂಕ್‍ಬಿಟ್ಟು ಹೊರಗೆ ಓಡಿದ್ದಾರೆ, ಈ ವೇಳೆ ಕ್ಯಾಸ್ ಕೌಂಟರ್‍ಗೆ ತೆರಳಿ ಕ್ಯಾಷಿಯರ್‍ನಿಂದ 9.90 ಲಕ್ಷ ರೂ. ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ. 
ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಇಂದಿರಾನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಈ ಹಿಂದೆ ಇದ್ದ ಇನ್ಸ್‍ಪೆಕ್ಟರ್ ಡಿ. ಕುಮಾರ್ (ಪ್ರಸ್ತುತ ಹಲಸೂರು ಉಪವಿಭಾಗ ಸಹಾಯಕ ಪೆÇಲೀಸ್ ಆಯುಕ್ತ) ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದರು. ಆರೋಪಿ ವಿರುದ್ಧ  2012ರ ಡಿಸೆಂಬರ್‍ನಲ್ಲಿ 10ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. 
2021 ಆಗಸ್ಟ್ 19 ರಂದು ಸಾಕ್ಷಿಗಳ ವಿಚಾರಣೆ ಹಾಗೂ ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಕ್ಕೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments