Select Your Language

Notifications

webdunia
webdunia
webdunia
webdunia

ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!

ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!
ಮೈಸೂರು , ಶುಕ್ರವಾರ, 7 ಏಪ್ರಿಲ್ 2023 (08:40 IST)
ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯಗೆ ವರುಣಾ ಟಿಕೆಟ್ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ವಿಜಯೇಂದ್ರ ಕೂಡ ವರುಣಾದಿಂದಲೇ ಸ್ಪರ್ಧಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
 
ವಿಜಯೇಂದ್ರ ಸ್ಪರ್ಧೆಗೆ ಯಡಿಯೂರಪ್ಪ ರೆಡ್ ಸಿಗ್ನಲ್ ಕೊಟ್ಟರು. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್ವೈ ಹೇಳಿದರು. ಇದರ ಹಿಂದೆ ನಾನಾ ಲೆಕ್ಕಾಚಾರಗಳು ಇದ್ಯಾ ಅನ್ನೋ ಮಾತುಗಳು ಶುರುವಾಗಿದೆ. ವರುಣಾಕ್ಕೆ ವಿಜಯೇಂದ್ರ ಬಿಟ್ಟು ಕಾರ್ಯರ್ತರ ಹೆಸರನ್ನಷ್ಟೇ ಹೈಕಮಾಂಡ್ಗೆ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. 

ಪ್ರತಾಪ್, ಸದಾನಂದ, ಕಾ.ಪು.ಸಿದ್ದಲಿಂಗಸ್ವಾಮಿ ಹೆಸರುಗಳು ಶಿಫಾರಸು ಮಾಡಲಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಿದ್ದರ ಅಸಲಿಯತ್ತೇನು..? ಯಡಿಯೂರಪ್ಪಗೆ ಬೆದರಿ ಶಿಫಾರಸ್ಸೋ..? ಅನ್ನೋ ಪ್ರಶ್ನೆಗಳು ಶುರುವಾಗಿದೆ. ಹೈಕಮಾಂಡ್ ಹೇಳಿದ್ರೆ ಮಾತ್ರ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್ವೈ ಹೇಳಿದ್ರು.

ಹಾಗಾದ್ರೆ ಶಿಕಾರಿಪುರದ ಜೊತೆಗೆ ವರುಣಾ ಕ್ಷೇತ್ರ ಕೊಟ್ಟರೆ ಎರಡು ಕಡೆ ಸ್ಪರ್ಧೆ ಎಂಬ ಸಂದೇಶ ರವಾನಿಸಿದ್ರಾ..? ಅನ್ನೋ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದದ ಅನುಮಾನವನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ವ್ಯಕ್ತಪಡಿಸಿದ್ದಾರೆ… ದೇವೇಗೌಡರು ಕೂಡ ಪರೋಕ್ಷವಾಗಿ ಅಡ್ಜೆಸ್ಟ್ಮೆಂಟ್ ರಾಜಕೀಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಘರ್ಷಣೆಗೆ 15 ಕಾರು ಜಖಂ! ಸುರಪುರದಲ್ಲಿ ನಿಷೇಧಾಜ್ಞೆ ಜಾರಿ