Select Your Language

Notifications

webdunia
webdunia
webdunia
webdunia

ಭಿನ್ನಮತ ಶಮನಕಾಗಿ ವರಿಷ್ಠರ ಸಮ್ಮುಖದಲ್ಲೇ ಸಭೆ: ಬಿ.ಎಸ್. ಯಡಿಯೂರಪ್ಪ

ಭಿನ್ನಮತ ಶಮನಕಾಗಿ ವರಿಷ್ಠರ ಸಮ್ಮುಖದಲ್ಲೇ ಸಭೆ: ಬಿ.ಎಸ್. ಯಡಿಯೂರಪ್ಪ
ಬೆಂಗಳೂರು , ಗುರುವಾರ, 30 ಜೂನ್ 2016 (11:13 IST)
ಪದಾಧಿಕಾರಿಗಳ ನೇಮಕದಲ್ಲಿ ಸೃಷ್ಟಿಯಾಗಿರುವ ಭಿನ್ನಮತವನ್ನು ಶೀಘ್ರದಲ್ಲೇ ಪರಿಹರಿಸುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸ್ವಷ್ಟಪಡಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಪದಾಧಿಕಾರಿಗಳ ನೇಮಕ ಕುರಿತಂತೆ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಕುರಿತು ಜುಲೈ 2 ವರಿಷ್ಠರ ಸಭೆ ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
 
ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಈಶ್ವರಪ್ಪ ಅವರು ಪಕ್ಷದ ಹಿರುಯ ನಾಯಕರು. ಪ್ರತಿ ಸ್ಥಾನಕ್ಕೂ 20 ರಿಂದ 25 ಸ್ಪರ್ಧಿಗಳಿದ್ದು, ನೇಮಕಾತಿ ಮಾಡುವ ಕುರಿತು ಅವರಲ್ಲಿ ಸಲಹೆ ಕೇಳುತ್ತೇನೆ. ಈ ಕುರಿತು ಎಲ್ಲರ ಬಳಿ ಹೋಗಿ ಸಲಹೆ ಕೇಳುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗೆ ಹೋಗು ಎಂದಿದ್ದಕ್ಕೆ ಆತ್ಮಹತ್ಯೆ