Select Your Language

Notifications

webdunia
webdunia
webdunia
webdunia

ಬಿ.ಎಸ್. ಯಡಿಯೂರಪ್ಪ ಕಂಸ ಇದ್ದಂತೆ: ಈಶ್ವರಪ್ಪ ಕಿಡಿ

ಬಿ.ಎಸ್. ಯಡಿಯೂರಪ್ಪ ಕಂಸ ಇದ್ದಂತೆ: ಈಶ್ವರಪ್ಪ ಕಿಡಿ
ಬೆಂಗಳೂರು , ಬುಧವಾರ, 28 ಡಿಸೆಂಬರ್ 2016 (12:15 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಂಸ ಇದ್ದಂತೆ ಎಂದು ಬಿಜೆಪಿ ಮುಖಂಡ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
 
ಮಹಾಭಾರತದಲ್ಲಿ ಕೃಷ್ಣನ ಜನ್ಮವಾಗುವ ಮುಂಚೆಯೇ ಕಂಸನಿಗೆ ಭಯ ಕಾಡಲು ಆರಂಭಿಸಿದಂತೆ ಬ್ರಿಗೇಡ್ ಆರಂಭಕ್ಕೆ ಮುನ್ನವೇ ಯಡಿಯೂರಪ್ಪ ಅವರಿಗೆ ಭಯ ಕಾಡತೊಡಗಿದೆ ಎಂದು ಲೇವಡಿ ಮಾಡಿದ್ದಾರೆ.
 
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಯಡಿಯೂರಪ್ಪ ಮಾತ್ರ ವಿರೋಧಿಸುತ್ತಿದ್ದಾರೆ. ಬಿಜೆಪಿಯ ಯಾವುದೇ ಮುಖಂಡರು ಬ್ರಿಗೇಡ್‌ನ್ನು ವಿರೋಧಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
 
ಬಿಜೆಪಿ ಪಕ್ಷಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರಿಂದ ಬ್ರಿಗೇಡ್‌ ನಿಲುವಿನಲ್ಲಿ ಬದಲಾವಣೆ ಮಾಡಲಾಗಿದೆ. ಕೇವಲ ಹಿಂದುಳಿದ, ಶೋಷಿತರ, ಬಡವರ ಏಳಿಗೆಗೆ ಶ್ರಮಿಸುವ ಏಕೈಕ ಗುರಿಯನ್ನು ಹೊಮ್ಮಲಾಗಿದೆ ಎಂದರು.
 
ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ. ಅವರ ನೇತೃತ್ವದಲ್ಲಿಯೇ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಅನುಮಾನ ಬೇಡ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ವಿಫಲವಾದರೆ ಮೋದಿ ರಾಜೀನಾಮೆ?