Select Your Language

Notifications

webdunia
webdunia
webdunia
webdunia

ರಮಾನಾಥ್ ರೈ ಗೆ ಗೃಹಖಾತೆ?

ರಮಾನಾಥ್ ರೈ ಗೆ ಗೃಹಖಾತೆ?
Bangalore , ಸೋಮವಾರ, 24 ಜುಲೈ 2017 (09:48 IST)
ಬೆಂಗಳೂರು: ಜಿ. ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಖಾತೆಗೆ ಇನ್ನೂ ಹೊಸ ಸಚಿವರ ನೇಮಕ ನಡೆದಿಲ್ಲ. ಆದರೆ ಮೂಲಗಳ ಪ್ರಕಾರ ಗೃಹ ಖಾತೆ ದ.ಕ. ಜಿಲ್ಲೆಯ ಶಾಸಕ ಹಾಗೂ ಪ್ರಸ್ತುತ  ಅರಣ್ಯ ಸಚಿವ ಬಿ.ರಮಾನಾಥ್ ರೈ ಕೈಸೇರಲಿದೆ.


ಭಾನುವಾರ ತುರ್ತಾಗಿ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಂದ ಬುಲಾವ್ ಬಂದ ಹಿನ್ನಲೆಯಲ್ಲಿ ಬೆಂಗಳೂರಿಗೆ ಆಗಮಿಸಿ ಮಾತುಕತೆ ನಡೆಸಿದ್ದು ಈ ಎಲ್ಲಾ ಅನುಮಾನಗಳಿಗೆ ರೆಕ್ಕೆ ಪುಕ್ಕ ಹುಟ್ಟುವಂತೆ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಗೃಹಖಾತೆ ಖಾಲಿಯಾಗಿಯೇ ಇದೆ.

ಸದ್ಯಕ್ಕೆ ಗೃಹಖಾತೆಯನ್ನೂ ಸಿಎಂ ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಕಿರು ಅವಧಿಗೆ ಈ ಸಚಿವ ಸ್ಥಾನ ನಿಭಾಯಿಸಲು ಪ್ರಮುಖ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಪಕ್ಷ ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಬಸ್